More

    ಸಮಾಜದಲ್ಲಿ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದು

    ಚಿತ್ರದುರ್ಗ: ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ಪೀರ್ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿ,
    ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೆ ಏರಿ ಶಿಕ್ಷಕ ವೃಂದಕ್ಕೆ ಅಪಾರ ಗೌರವವನ್ನು ತಂದು ಕೊಟ್ಟಿದ್ದಾರೆ. ಶಿಕ್ಷಕರು ಬೋಧನೆಯೊಂದಿಗೆ ಆಡಳಿತದಲ್ಲಿ ಉನ್ನತ ಹುದ್ದೆ ನಿರ್ವಹಣೆಯಲ್ಲೂ ಸಮರ್ಥರಾಗಿರುತ್ತಾರೆ. ಶಿಕ್ಷಕರು ಕೆಲಸದಿಂದ ನಿವೃತ್ತಿಯಾಗಬಹುದು. ಆದರೆ ವೃತ್ತಿಯಿಂದ ಜೀವನದಲ್ಲ,ಗುರುಗಳನ್ನು ಗೌರವಿಸುವುದು ನಮ್ಮ ದೇಶದ ಸಂಸ್ಕೃತಿ ಎಂದರು.
    ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಹಾಲಸ್ವಾಮಿ ಮಾತನಾಡಿ ರಾಧಾಕೃಷ್ಣನ್ ಅವರು ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು ಎಂದರು. ಪಕ್ಷದ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಡಿ.ಎನ್.ಮೈಲಾರಪ್ಪ,ಎಸ್.ಜೆ.ಎಂ.ಕಾಲೇಜು ಉಪನ್ಯಾಸಕ ಎಸ್.ಲಕ್ಷ್ಮೀಕಾಂತ್ ಮಾತನಾಡಿದರು.
    ಕೆ.ಪಿ.ಸಂಪತ್‌ಕುಮಾರ್,ಮೋಹನ್ ಪೂಜಾರಿ,ಯು.ಲಕ್ಷ್ಮೀಕಾಂತ್,ಎನ್.ಡಿ.ಕುಮಾರ್,ಮಧುಕುಮಾರ್,ಮಂಜುನಾಥ್,ಮಹಡಿ ಶಿವಮೂರ್ತಿ,ಜಿ.ವಿ.ಮಧುಗೌಡ, ಅಶೋಕ್‌ನಾಯ್ಡು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts