ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆ.1ರಂದು ಆರಂಭವಾದ ಆರ್ಟಿಪಿಸಿಆರ್ ವೈರಾಲಜಿ ಲ್ಯಾಬ್ನಲ್ಲಿ ಈವರೆಗೆ 50 ಸಾವಿರಕ್ಕೂ ಹೆಚ್ಚು ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದರು.
ಈ ಪರೀಕ್ಷೆಗಳಿಗೆ ಬೇಕಾದ ಆರ್ಟಿಪಿಸಿಆರ್ ಕಿಟ್ಗಳನ್ನು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಯೋಗಾಲಯದಿಂದ ಪಡೆಯಲಾಗುತ್ತಿದೆ. ನ.5ರ ಅಂತ್ಯಕ್ಕೆ 50,562 ಟೆಸ್ಟ್ ಮಾಡಲಾಗಿದ್ದು ಅವುಗಳಲ್ಲಿ 4,687 ಪಾಸಿಟಿವ್, 307 ಇನ್ಕನ್ಕ್ಲ್ಯೂಸಿವ್ ಮತ್ತು 45,568 ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಹೇಳಿದರು.
ಪ್ರಯೋಗಾಲಯದಲ್ಲಿ ಇಬ್ಬರು ಮೈಕ್ರೋಬಯಾಲಜಿಸ್ಟ್, ಒಬ್ಬರು ಹಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞ, 11 ಕಿರಿಯ ತಂತ್ರಜ್ಞರು, 4 ಡೇಟಾ ಎಂಟ್ರಿ ಆಪರೇಟರ್ಗಳು ಸೇರಿ ಒಟ್ಟು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಸನ ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶರತ್ಕುಮಾರ್ ಶೆಟ್ಟಿ ಅವರನ್ನು ಪ್ರಯೋಗಾಲಯಕ್ಕೆ ನಿಯೋಜಿಸಿದ್ದು ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಮೈಕ್ರೋಬಯಾಲಜಿಸ್ಟ್ ಡಾ. ವಿಶ್ವಜಿತ್ ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗಿದೆ ಎಂದರು.
ಲ್ಯಾಬ್ನ ಕಾರ್ಯಕ್ಷಮತೆ ಹೆಚ್ಚಿಸಲು ಆಟೋಮೇಟೆಡ್ ಆರ್ಎನ್ಎ ಎಕ್ಸ್ಟ್ರಾಕ್ಟರ್ ಮತ್ತು 96 ವೆಲ್ಸ್ ಆರ್ಟಿಪಿಸಿಆರ್ ಕಿಟ್ನ್ನು ಹೆಚ್ಚುವರಿಯಾಗಿ ಬೆಂಗಳೂರಿನ ಕರ್ನಾಟಕ ರಾಜ್ಯ ಡ್ರಗ್ಸ್ ಆಂಡ್ ಲಾಜಿಸ್ಟಿಕ್ ಸೊಸೈಟಿ ಸರಬರಾಜು ಮಾಡುತ್ತಿದೆ. ಲ್ಯಾಬ್ನಲ್ಲಿ ದಿನಕ್ಕೆ 1200ಕ್ಕೂ ಹೆಚ್ಚು ಪರೀಕ್ಷೆ ಮಾಡಬಹುದಾಗಿದೆ. ತ್ವರಿತವಾಗಿ ಫಲಿತಾಂಶ ದೊರೆಯುತ್ತಿದ್ದು ರೋಗಿಗಳ ಪತ್ತೆ, ಚಿಕಿತ್ಸೆ, ರೋಗ ಹರಡದಂತೆ ಮುಂಜಾಗ್ರತೆ ವಹಿಸಲು ಸಹಕಾರಿಯಾಗಿದೆ.
ಪ್ರಯೋಗಾಲಯ ಸ್ಥಾಪನೆಗೆ ಸಿವಿಲ್ ಕಾಮಗಾರಿಗಳಿಗಾಗಿ ಸರ್ಕಾರದಿಂದ 25 ಲಕ್ಷ ರೂ., ಉಪಕರಣಗಳು ಮತ್ತು ಕನ್ಸ್ಯೂಮಬಲ್ಸ್ಗೆ 1.23 ಕೋಟಿ ರೂ. ಸೇರಿ ಒಟ್ಟು 1.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಸಿವಿಲ್ ಕಾಮಗಾರಿಗಳನ್ನು ನಿರ್ವಿುತಿ ಕೇಂದ್ರದವರು ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.