More

    ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಬಗ್ಗೆ ಆತನ ಆಪ್ತ ಪೊಲೀಸರಿಗೆ ತಿಳಿಸಿದ ಭಯಾನಕ ಸತ್ಯಗಳು…

    ಮುಂಬೈ: ಇತ್ತೀಚೆಗಷ್ಟೇ ಪೊಲೀಸರಿಂದ ಬಂಧಿತನಾಗಿರುವ ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಆಪ್ತನಾಗಿದ್ದ ಇಜಾಜ್​ ಲಕ್ಡಾವಾಲಾ ಕೆಲವು ಪ್ರಮುಖ ಮಾಹಿತಿಗಳನ್ನು ವಿಚಾರಣೆ ವೇಳೆ ನೀಡಿದ್ದಾನೆ.

    ಮುಂಬೈ ದಾಳಿಯ ಮಾಸ್ಟರ್​ ಮೈಂಡ್​, ಲಷ್ಕರ್​ ಇ ತೊಯ್ಬಾ ಉಗ್ರಸಂಘಟನೆಯ ಸಂಸ್ಥಾಪಕರಲ್ಲಿ ಒಬ್ಬನಾದ ಹಫೀಜ್​ ಸೈಯದ್​​ಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಣಕಾಸು ಸಹಕಾರ ಸೇರಿ ಹಲವು ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ದಾವೂದ್​ ಇಬ್ರಾಹಿಂನನ್ನು ಭೇಟಿ ಮಾಡಲು ಆತನ ಕರಾಚಿಯಲ್ಲಿರುವ ಮನೆಗೆ ಪಾಕಿಸ್ತಾನ ಸೇನೆಯ ಪ್ರಮುಖ ಉನ್ನತಾಧಿಕಾರಿಗಳು ಬರುತ್ತಿದ್ದರು. ಹಫೀಜ್​ ಸೈಯದ್​ ಸೇರಿ ಹಲವರಿಗೆ ದಾವೂದ್​ ಹಣಕಾಸು ಸಹಕಾರ ನೀಡುತ್ತಿದ್ದ. ಅಷ್ಟೇ ಅಲ್ಲದೆ ಅನೇಕ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದ ಎಂಬುದು ಅವರಿಂದಲೇ ನನಗೆ ತಿಳಿದಿದೆ ಎಂದು ಇಜಾಜ್​ ಹೇಳಿದ್ದಾನೆ.

    ದಾವೂದ್​ ಬೋಗಸ್​ ಕಂಪನಿಗಳ ದೊಡ್ಡ ಜಾಲವನ್ನೇ ಹೊಂದಿದ್ದ. ಮುಂಬೈ, ಬೆಂಗಳೂರು, ದುಬೈ, ಲಂಡನ್​ಗಳಲ್ಲಿ ವಿವಿಧ ರಿಯಲ್ ಎಸ್ಟೇಟ್​ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದ ಎಂದು ಮಾಹಿತಿ ನೀಡಿದ್ದಾನೆ.
    ಕಾನೂನು ಬಾಹಿರ ಉದ್ಯಮಗಳಿಂದಲೇ ದಾವೂದ್​ಗೆ ಹೆಚ್ಚಿನ ಪ್ರಮಾಣದ ಆದಾಯ ಬರುತ್ತಿತ್ತು. ಆ ಹಣದಲ್ಲಿ ಹೆಚ್ಚಿನ ಪಾಲನ್ನು ಭಯೋತ್ಪಾದನಾ ಸಂಘಟನೆಗಳಿಗಾಗಿ ಕೆಲಸ ಮಾಡುತ್ತಿರುವ ಎನ್​ಜಿಒಗಳಿಗೆ ನೀಡುತ್ತಿದ್ದ ಎಂದು ಹೇಳಿದ್ದಾನೆ.

    ದಾವೂದ್​ಗೆ ನೇಪಾಳ ಹಾಗೂ ಬಾಂಗ್ಲಾದೇಶದಲ್ಲಿ ಬಲಿಷ್ಠ ನೆಲೆಯಿದೆ. ಗಡಿಯಾಚೆಗೆ ಮಾದಕ ವಸ್ತು ಸಾಗಣೆ ಮತ್ತು ನಕಲಿ ಕರೆನ್ಸಿ ಅಕ್ರಮ ಮಾರಾಟಗಳಿಗೆ ಈ ನೆಲೆಗಳೇ ಮೂಲ ಎಂದು ಹೇಳಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts