More

    ಕೆಂಚಿಕೊಪ್ಪ ಗ್ರಾಪಂಗೆ ಜೀನಹಳ್ಳಿ ಸೇರಿಸಬೇಡಿ

    ದಾವಣಗೆರೆ: ನ್ಯಾಮತಿ ತಾಲೂಕು ಕೆಂಚಿಕೊಪ್ಪ ಗ್ರಾಪಂಗೆ ಜೀನಹಳ್ಳಿ ಗ್ರಾಮವನ್ನು ಸೇರಿಸಬಾರದು ಎಂದು ಆರುಂಡಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಗ್ರಾಮಸ್ಥರು ಶುಕ್ರವಾರ ಈ ಕುರಿತು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರಿಗೆ ಮನವಿ ಸಲ್ಲಿಸಿದರು.

    ಆರುಂಡಿ ಗ್ರಾಮ ಕೆಂಚಿಕೊಪ್ಪ ಗ್ರಾಪಂ ವ್ಯಾಪ್ತಿಗೆ ಸೇರಿದ್ದು, 6 ಗ್ರಾಪಂ ಸದಸ್ಯರಿದ್ದಾರೆ. ಕೆಂಚಿಕೊಪ್ಪದಲ್ಲಿ 5 ಗ್ರಾಪಂ ಸದಸ್ಯರಿದ್ದಾರೆ. ಇದುವರೆಗೆ ಯಾವುದೇ ತೊಂದರೆ ಇಲ್ಲದಂತೆ ಗ್ರಾಮದ ಆಡಳಿತ ಸುಗಮವಾಗಿ ನಡೆದುಕೊಂಡು ಬಂದಿದೆ.

    ಈಗ ಹೆಚ್ಚುವರಿಯಾಗಿ ಜೀನಹಳ್ಳಿಯನ್ನು ಕೆಂಚಿಕೊಪ್ಪ ಗ್ರಾಪಂಗೆ ಸೇರಿಸುವ ಪ್ರಸ್ತಾಪ ಜಿಲ್ಲಾಡಳಿತದ ಮುಂದಿದೆ. ಆ ಗ್ರಾಮವನ್ನು ಸೇರಿಸಬಾರದು. ಕೆಂಚಿಕೊಪ್ಪ ಪಂಚಾಯಿತಿಯನ್ನು ಯಥಾಸ್ಥಿತಿಯಲ್ಲಿ ಉಳಿಸಬೇಕು ಎಂದು ಒತ್ತಾಯಿಸಿದರು.

    ಗ್ರಾಮದ ಮುಖಂಡರಾದ ಎಚ್.ಶಿವಪ್ಪ, ರುದ್ರಮುನಿಯಪ್ಪ, ವೀರೇಶ್, ಬಿ.ವಿ.ಪ್ರಕಾಶ್, ವಿ.ಪಿ. ಮಹೇಶ್ವರಪ್ಪ, ಬಿ.ಜಿ.ಚೇತನ್, ಮಲ್ಲಿಕಾರ್ಜುನಪ್ಪ, ಶ್ರೀನಿವಾಸ್, ಬಿ.ನಾಗರಾಜ್, ಟಿ.ಶಿವರಾಜ್,ಕೆ.ತಿಮ್ಮೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts