More

    ದೇಶದ ಆರ್ಥಿಕತೆಗೆ ಜೀವ ವಿಮಾ ನಿಗಮ ಕೊಡುಗೆ

    ಭಾರತೀಯ ಜೀವ ವಿಮಾ ನಿಗಮವು ದೇಶದ ಆರ್ಥಿಕತೆಯಲ್ಲಿ ಬಹಳ ದೊಡ್ಡ ಕೊಡುಗೆ ನೀಡಿದೆ ನಿಗಮದ ಹರಿಹರ ಶಾಖಾಧಿಕಾರಿ ಎಸ್.ಡಿ. ಕೃಷ್ಣಮೂರ್ತಿ ಹೇಳಿದರು.
     ಭಾರತೀಯ ಜೀವ ವಿಮಾ ನಿಗಮ ಹರಿಹರ ಶಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 67ನೇ ವಿಮಾ ಸಪ್ತಾಹ ಕಾರ್ಯಕ್ರಮಕ್ಕೆ ಪ್ರಥಮ ಪ್ರೀಮಿಯಂ ತುಂಬಿದ ಲಲಿತಾ ಮೋಹಿತೆ ಅವರೊಂದಿಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
     ಸಂಸ್ಥೆಯ ಪ್ರತಿಯೊಂದು ಹೊಸ ಪಾಲಿಸಿಯ ಪ್ರಯೋಜನ ಪಾಲಿಸಿದಾರರಿಗೆ ತಲುಪುವಂತೆ ನೋಡಿಕೊಳ್ಳುವುದು ವಿಮಾ ಪ್ರತಿನಿಧಿಗಳ ಕರ್ತವ್ಯ. ಸಪ್ತಾಹ ಅಂಗವಾಗಿ ಏಳುದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಮಾ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕಾರ ನೀಡಬೇಕು ಎಂದು ತಿಳಿಸಿದರು.
     ಉಪ ಶಾಖಾಧಿಕಾರಿ ಸಿದ್ದು ಪಿ. ಆರೇರ್ ಮಾತನಾಡಿ, ಸಂಸ್ಥೆಯಲ್ಲಿ ತಂತ್ರಜ್ಞಾನ ಬಳಕೆ ಹಾಗೂ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಆಡಳಿತ ಅಧಿಕಾರಿ ಜೆ.ಎಸ್. ಬಾದಾಮಿ ಹಾಗೂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ವಿಮಾ ಪ್ರತಿನಿಧಿಗಳು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts