More

    ಮಕ್ಕಳಲ್ಲಿ ಪರಿಸರ ಪ್ರೀತಿ ಮೂಡಿಸಿ

    ದಾವಣಗೆರೆ: ಮಕ್ಕಳಲ್ಲಿ ಗಿಡ, ಮರಗಳನ್ನು ಬೆಳೆಸುವ ಹವ್ಯಾಸವನ್ನು ರೂಢಿಸಬೇಕು ಎಂದು ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅಭಿಪ್ರಾಯಪಟ್ಟರು.
     ನಗರದ ಲೋಕಿಕೆರೆ ರಸ್ತೆ ಸಿದ್ದೇಶ್ವರ ಬಡಾವಣೆಯ ಉದ್ಯಾನವನದಲ್ಲಿ ನಾಗರಿಕರು ಇತ್ತೀಚೆಗೆ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾವಿನ ಗಿಡ ನೆಟ್ಟು ಮಾತನಾಡಿ, ಮಕ್ಕಳು ನಮ್ಮ ಕುಟುಂಬದ ಆಸ್ತಿಯಾದರೆ ಗಿಡ ಮರಗಳು ಪರಿಸರದ ಆಸ್ತಿ ಎಂದು ಹೇಳಿದರು.
     ಮಹಾನಗರ ಪಾಲಿಕೆ ಸದಸ್ಯೆ ಗೀತಾ ನಾಗಪ್ಪ, ತಿಮ್ಮಕ್ಕ ಅವರ ಪುತ್ರ ಉಮೇಶ್ ಬಳ್ಳೂರು, ಅಧ್ಯಾಪಕ ನಾಗರಾಜ ಸಿರಿಗೆರೆ, ಎಸ್‌ಬಿಐನ ವ್ಯವಸ್ಥಾಪಕ ಎಚ್.ಬಿ. ಜಯ್ಯಪ್ಪ, ನಿವೃತ್ತ ಮುಖ್ಯ ಶಿಕ್ಷಕ ಮಹೇಶ್ವರಯ್ಯ, ವಿನೂತನ ಮಹಿಳಾ ಮಂಡಳಿಯ ಶೈಲಜಾ ತಿಮ್ಮೇಶಪ್ಪ, ಶೇಖರಪ್ಪ, ಸುರೇಶ್ ಚಾವಡಿ, ಬಸವರಾಜಪ್ಪ ಐಗೂರು ಪಾಲ್ಗೊಂಡಿದ್ದರು.
     ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ನಾಗರಿಕರ ಪರವಾಗಿ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts