More

    ಅಭಿಮಾನಿಗಳ ನಡುವೆ ಸಿದ್ದೇಶ್ವರ ಜನ್ಮದಿನ ಸಂಭ್ರಮ

    ದಾವಣಗೆರೆ : ಸಂಸದ ಜಿ.ಎಂ. ಸಿದ್ದೇಶ್ವರ ಅವರ 71ನೇ ಜನ್ಮದಿನವನ್ನು ನಗರದಲ್ಲಿ ಬುಧವಾರ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
     ಬೆಳಗ್ಗೆ ಆವರಗೆರೆ ಬಳಿಯ ಗೋಶಾಲೆಗೆ ತೆರಳಿದ ಸಿದ್ದೇಶ್ವರ ಅವರು, ಪತ್ನಿ ಗಾಯತ್ರಿ ಅವರ ಜತೆಗೂಡಿ ಗೋಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೋಶಾಲೆಗೆ ಟ್ರಾೃಕ್ಟರ್ ಒಂದನ್ನು ನೀಡಿದರು. ಪುತ್ರ ಜಿ.ಎಸ್. ಅನಿತ್ ಕುಮಾರ್, ಮುಖಂಡರಾದ ಲೋಕಿಕೆರೆ ನಾಗರಾಜ, ರಾಜನಹಳ್ಳಿ ಶಿವಕುಮಾರ್, ಜಿ.ಎಸ್. ಶ್ಯಾಮ್ ಇತರರು ಇದ್ದರು.
     ನಂತರ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಆಗಮಿಸಿದ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದೇಶ್ವರ ಅಭಿಮಾನಿಗಳು ನಗರದ ವಿವಿಧ ವೃತ್ತಗಳಲ್ಲಿರುವ ಸಂಗೊಳ್ಳಿ ರಾಯಣ್ಣ, ವೀರ  ಮದಕರಿ ನಾಯಕ, ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣನ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
     ಜನ್ಮದಿನದ ಪ್ರಮುಖ ಕಾರ್ಯಕ್ರಮ ಪಿಬಿ ರಸ್ತೆಯ ಅರುಣ ಟಾಕೀಸ್ ಎದುರಿನ ವಾಣಿ ಹೊಂಡಾ ಶೋರೂ ಆವರಣದಲ್ಲಿ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಶುಭಾಶಯ ಕೋರಿದರು.
     ವೇದಿಕೆಯಲ್ಲಿ ಜನಪ್ರತಿನಿಧಿಗಳು, ಅಭಿಮಾನಿಗಳು, ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಸಿದ್ದೇಶ್ವರ ಅವರು ಕೇಕ್ ಕತ್ತರಿಸಿ ಜನ್ಮದಿನದ ಸಂಭ್ರಮವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರು, ಕ್ರೀಡಾಪಟುಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts