ದಾವಣಗೆರೆ: ನಗರದ ಲೆಕ್ಕ ಪರಿಶೋಧಕ ಬಿ.ಎನ್.ರಾಜೇಂದ್ರಬಾಬು, ಪತ್ನಿ ನಿರ್ಮಲಾರ ಅಮೆರಿಕಾ ಪ್ರವಾಸ ಅನುಭವದ ಕಥನ ಕೃತಿ ‘ಪೂರ್ವಾಪರ’ವನ್ನು ಶುಕ್ರವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಪತ್ರಕರ್ತ ಬಿ.ಎನ್.ಮಲ್ಲೇಶ್ ಬಿಡುಗಡೆ ಮಾಡಿದರು.
ಈ ವೇಳೆ ಬಿ.ಎನ್.ಮಲ್ಲೇಶ್ ಮಾತನಾಡಿ, ಎಂ.ಪಿ.ಗುರು ಸಾಹಿತ್ಯಿಕ ರೂಪ ನೀಡಿರುವ ಕೃತಿಯು ಮಿಕ್ಸಡ್ ಡಬಲ್ ರೀತಿಯದಾಗಿದೆ. ಬೇರೊಬ್ಬರ ಪ್ರವಾಸದ ಅನುಭವಗಳನ್ನು ಮನಮುಟ್ಟುವಂತೆ ವಿವರಿಸಲಾಗಿದೆ. ನಿರ್ಮಲಾ ಅವರ ಮಾತುಗಳು ಕೃತಿಯಲ್ಲಿವೆ ಎಂದರು. ಬಿ.ಎನ್.ರಾಜೇಂದ್ರಬಾಬು, ನಿರ್ಮಲಾ ಸುದ್ದಿಗೋಷ್ಠಿಯಲ್ಲಿದ್ದರು.