More

    ಯಕ್ಷಗಾನ ಸಪ್ತಾಹಕ್ಕೆ ದಶಮಾನೋತ್ಸವ ಸಂಭ್ರಮ

    ಭಟ್ಕಳ: ಶ್ರೀ ಮಹಿಷಾಸುರ ಮರ್ದಿನಿ ಯಕ್ಷಕಲಾ ಪ್ರತಿಷ್ಠಾನ ಗೋಳಿಕುಂಬ್ರಿ ಹಾಗೂ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ಕುಂಭಾಶಿ ಆಶ್ರಯದಲ್ಲಿ ನಡೆಸಿಕೊಂಡು ಬಂದ ಪೌರಾಣಿಕ ಯಕ್ಷಗಾನ ಸಪ್ತಾಹಕ್ಕೆ ಈ ವರ್ಷ ದಶಮಾನೋತ್ಸವ ಸಂಭ್ರಮ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮಧ್ಯಸ್ಥ ತಿಳಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿದ ಅವರು, ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಪೌರಾಣಿಕ ಯಕ್ಷೋತ್ಸವ ಯಕ್ಷದಶಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಫೆ. 2ರಿಂದ ಫೆ. 11ರ ತನಕ ವಿವಿಧ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಫೆ. 2ರಂದು ಸಮರ ಸೌಗಂಧಿಕಾ, ಫೆ. 3ರಂದು ಸೀತಾ ವಿಯೋಗ, ಫೆ. 4ರಂದು ಕಪಾಲ ಗ್ರಹಣ, ಫೆ. 5ರಂದು ಧುರವೀಳ್ಯ, ಫೆ. 6ರಂದು ಶುಕ್ರಶಾಪ, ಫೆ. 7ರಂದು ಬರ್ಬರೀಕ, ಫೆ. 8ರಂದು ಸತಿಶಕ್ತಿ, ಫೆ. 9ರಂದು ಮಂಥರಾ ಕುಮಂತ್ರ, ಫೆ. 10ರಂದು ಸತ್ಯಮೇವ ಜಯತೆ, ಫೆ. 11ರಂದು ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನವು ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯಲಿದೆ.

    ಯಕ್ಷದಶಾಹ ಕಾರ್ಯಕ್ರಮದಲ್ಲಿ ಭಾಗವತರಾಗಿ ಸರ್ವೆಶ್ವರ ಹೆಗಡೆ ಮೂರೂರು, ಗಣೇಶ ಯಾಜಿ ಇಡಗುಂಜಿ, ಮೃದಂಗ ವಾದಕರಾಗಿ ಗಜಾನನ ಭಂಡಾರಿ ಬೋಳಗೆರೆ, ಲಕ್ಷ್ಮೀನಾರಾಯಣ ಹೆಗಡೆ ಸಂಪ, ಸ್ತ್ರೀವೇಷದಲ್ಲಿ ಸುಬ್ರಹ್ಮಣ್ಯ ಹೆಗಡೆ ಮೂರೂರು, ಹಾಸ್ಯ ಕಲಾವಿದರಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಗಣಪತಿ ಹೆಗಡೆ ತೋಟಿಮನೆ, ನಾಗೇಶ ಗೌಡ ಕುಳಿಮನೆ, ಮಾರುತಿ ನಾಯ್ಕ, ವಿನಾಯಕ ಮಧ್ಯಸ್ಥ, ವಿವೇಕ ಮಧ್ಯಸ್ಥ, ಅತಿಥಿ ಕಲಾವಿದರುಗಳಾಗಿ ಭಾಗವತಿಕೆಯಲ್ಲಿ ವಿಧ್ವಾನ ಗಣಪತಿ ಭಟ್ಟ ಯಲ್ಲಾಪುರ, ಕೇಶವ ಹೆಗಡೆ ಕೊಳಗಿ, ರಾಮಕೃಷ್ಣ ಹೆಗಡೆ ಹಿಲ್ಲೂರು, ರಾಘವೇಂದ್ರ ಆಚಾರ್ಯ ಜನ್ಸಾಲೆ, ಶಂಕರ ಭಟ್ಟ ಬ್ರಹ್ಮೂರು, ಸುರೇಶ ಶೆಟ್ಟರು, ಮೃದಂಗದಲ್ಲಿ ಶಂಕರ ಭಾಗವತ ಯಲ್ಲಾಪುರ, ಪರಮೇಶ್ವರ ಭಂಡಾರಿ ರ್ಕ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುನೀಲ ಭಂಡಾರಿ ಕಡತೋಕ, ನರಸಿಂಹ ಹೆಗಡೆ ಮೂರೂರು, ಪಿ.ಕೆ. ಹೆಗಡೆ ಹರಿಕೇರಿ. ಚಂಡೆವಾದನದಲ್ಲಿ ಗಣೇಶ ಗಾಂವ್ಕರ್ ಹಳವಳ್ಳಿ, ಪ್ರಸನ್ನ ಹೆಗ್ಗಾರ, ಗಜಾನನ ಹೆಗಡೆ ಸಾಂತೂರು, ಶಿವಾನಂದ ಕೋಟ, ರಾಮನ್ ಹೆಗಡೆ ಮೂರೂರು, ಮಂಜುನಾಥ ಭಂಡಾರಿ ರ್ಕ, ಪಾತ್ರಧಾರಿಗಳಾಗಿ ಕೃಷ್ಣ ಯಾಜಿ ಬಳ್ಕೂರು, ಗೋಪಾಲ ಆಚಾರಿ ತೀರ್ಥಹಳ್ಳಿ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ, ಮಹಾಬಲೇಶ್ವರ ಭಟ್ಟ ಇಟಗಿ, ಈಶ್ವರ ನಾಯ್ಕ ಮಂಕಿ, ಅಶೋಕ ಭಟ್ಟ ಸಿದ್ದಾಪುರ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಶ್ರೀಧರ ಭಟ್ಟ ಕಾಸರಕೋಡು, ಶಂಕರ ಹೆಗಡೆ ನೀಲ್ಕೋಡು, ನಾಗರಾಜ ಭಂಡಾರಿ ಗುಣವಂತೆ, ಮಾಧವ ಜೋಗಿ ನಾಗೂರು, ರಕ್ಷಿತ್ ಕುಳಿಮನೆ, ಲೋಕೇಶ ಗುಣವಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ನಾಗರಾಜ ಮಧ್ಯಸ್ಥ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts