More

    ಪಕ್ಷ ನೋಡಿ ನಾನು ಪ್ರಚಾರಕ್ಕೆ ಬರುವುದಿಲ್ಲ, ವ್ಯಕ್ತಿ ನೋಡಿ ಕ್ಯಾಂಪೇನ್​ ಮಾಡುತ್ತೇನೆ: ದರ್ಶನ್​

    ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಉಪಚುನಾವಣೆಯ ಪ್ರಚಾರ ಕಣ ಕಲರ್​ಫುಲ್​ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಕ್ಯಾಂಪೇನ್​ಗೆ ಇಳಿದಿದ್ದಾರೆ. ಪ್ರಚಾರಕ್ಕೆ ತೆರಳುವುದಕ್ಕೂ ಮುನ್ನ ಮಾತನಾಡಿದ ಅವರು, ಪಕ್ಷ ಮತ್ತು ನಿರ್ಮಾಪಕರು ಎಂದ ಮಾತ್ರಕ್ಕೆ ನಾನು ಪ್ರಚಾರಕ್ಕೆ ಇಳಿಯುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.

    ಇದನ್ನೂ ಓದಿ: ಅದಿತಿ ಪ್ರಭುದೇವ ಅಕೌಂಟಲ್ಲಿ ಇನ್ನೆರಡು ಸಿನಿಮಾ

    ನಿರ್ಮಾಪಕರಾದ ಮುನಿರತ್ನ ಅವರು ಕರೊನಾ ಲಾಕ್ ಡೌನ್ ಸಮಯದಲ್ಲಿ ಆರ್​ಆರ್ ನಗರ ಕ್ಷೇತ್ರದ ಜನತೆಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ದಿನಸಿ ವಿತರಿಸಿದ್ದಾರೆ. ಆ ಒಂದು ಕಾರಣಕ್ಕೆ ಮಾನವೀಯತೆಯ ದೃಷ್ಟಿಯಿಂದ ಅವರ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದೇನೆ ಎಂದರು.

    ಇದನ್ನೂ ಓದಿ: ಕಲರ್​ಫುಲ್​ ಬಿಕಿನಿಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಬೋಲ್ಡ್​ ಬ್ಯೂಟಿ ಯಾರೆಂದು ಗುರುತಿಸುವಿರಾ?

    ಸಂಕಷ್ಟಕ್ಕೆ ನಿಂತವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ. ಅವರು ನನ್ನ ಆಪ್ತರು ಅವರು ಕರೆದಲ್ಲಿಗೆ ತೆರಳುತ್ತೇನೆ ಎಂದಿದ್ದಾರೆ. ಅಂದಹಾಗೆ, ಇಂದು ಇಡೀ ದಿನ ದರ್ಶನ್​ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದು, ಕ್ಯಾಂಪೇನ್​ಗೆ ಸ್ಟಾರ್ ಕಳೆ ಸಿಕ್ಕಂತಾಗಿದೆ.

    ಹ್ಯಾಪಿ ಬರ್ತ್​ಡೇ ಜೂ. ಯಶ್​: ಯಶ್- ರಾಧಿಕಾ ಪುತ್ರನಿಗೆ ಮೊದಲ ವರ್ಷದ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts