ಬೆಂಗಳೂರು: ಸದ್ಯ ಕರ್ನಾಟಕದಲ್ಲಿ ನಟ ದರ್ಶನ್ ವಿಚಾರ ಹೆಚ್ಚಾಗಿಯೇ ಸುದ್ದಿಯಾಗುತ್ತಿದೆ. ಸಾಲದ ಹೆಸರಿನಲ್ಲಿ ದರ್ಶನ್ಗೆ ಮೋಸ ಮಾಡಲು ಹೊರಟಿದ್ದ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಹೀಗಿರುವಾಗಲೇ ದರ್ಶನ್ 55ನೇ ಸಿನಿಮಾ ಬಗ್ಗೆಯೂ ಕೆಲ ಮಾಹಿತಿ ಹೊರಬಿದ್ದಿದೆ.
ದರ್ಶನ್ 55ನೇ ಸಿನಿಮಾವನ್ನು ವಿ ಹರಿಕೃಷ್ಣ ನಿರ್ದೇಶಿಸಲಿದ್ದಾರೆ. ಶೈಲಜಾ ರಾಜ್ ಮತ್ತು ಬಿ ಸುರೇಶ್ ಸಿನಿಮಾಕ್ಕೆ ಹಣ ಹೂಡಲಿದ್ದಾರೆ. ಮೀಡಿಯಾ ಹೌಸ್ ಸ್ಟುಡಿಯೋ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಈ ವಿಚಾರವನ್ನು ಸ್ವತಃ ಶೈಲಜಾ ರಾಜ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಹಳ ಅಭಿಮಾನದಿಂದ ಡಿ55 ಟೇಕ್ ಆಫ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಹರಿಕೃಷ್ಣ, ಬಿ ಸುರೇಶ್, ದರ್ಶನ್ ಜತೆ ತಾವಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
#D55 Taking off with Pride @dasadarshan @bsuresha @harimonium pic.twitter.com/2ogunLps9w
— Shylaja Nag (@shylajanag) July 14, 2021
ಅಂದ ಹಾಗೆ ಇದೇ ತಂಡ ಹಿಂದೆ ಯಜಮಾನ ಸಿನಿಮಾದಲ್ಲೂ ಕಾಣಿಸಿಕೊಂಡಿತ್ತು. ಆ ಸಿನಿಮಾದಲ್ಲಿ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದರೆ, ವಿ ಹರಿಕೃಷ್ಣ ನಿರ್ದೇಶನದ ಜವಬ್ದಾರಿ ಹೊತ್ತಿದ್ದರು. ಬಿ ಸುರೇಶ್ ಮತ್ತು ಶೈಲಜಾ ರಾಜ್ ನಿರ್ಮಾಣ ಮಾಡಿದ್ದರು.
ಕರೊನಾದಿಂದ ಮೃತಪಟ್ಟ 10 ಸಾವಿರಕ್ಕೂ ಅಧಿಕ ಕೃಷಿಕರ ಸಾಲ ಮನ್ನಾಕ್ಕೆ ಚಿಂತನೆ: ಸಚಿವ ಎಸ್.ಟಿ ಸೋಮಶೇಖರ್
ರಸ್ತೆ ಬಳಿ ಚಾಕಲೇಟ್ ರಾಶಿ: ಕ್ವಿಂಟಾಲ್ಗಟ್ಟಲೆ ಚಾಕಲೇಟ್ನ್ನು ಎಸೆದು ಹೋದ ಡೀಲರ್!