More

    ಮರುಳಸಿದ್ಧೇಶ್ವರ ಸ್ವಾಮಿ ತೇರುಗಡ್ಡೆ ಹೊರಗೆ

    ಉಜ್ಜಿನಿ: ಉಜ್ಜಿನಿ ಪೀಠದ ಜಗದ್ಗುರು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಭಾನುವಾರ ತೇರುಗಡ್ಡೆಯನ್ನು ಹೊರ ತರಲಾಯಿತು.

    ಬೆಳಗ್ಗೆ 10.30ಕ್ಕೆ ಸಕಲ ವಾದ್ಯ ಮೇಳ, ಭಕ್ತರ ಜಯ ಘೋಷದೊಂದಿಗೆ ತೇರಿನ ಮನೆಯಿಂದ ಹೊರತಂದು ರಥ ಕಟ್ಟುವ ಸ್ಥಳದಲ್ಲಿ ನಿಲ್ಲಿಸಲಾಯಿತು. ಗ್ರಾಮದ ಹಾಗೂ 9 ಪಾದಗಟ್ಟೆಗಳ ಭಕ್ತರು ಪಾಲ್ಗೊಂಡಿದ್ದರು. ಮೇ 15 ರಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವವು ಜರುಗಲಿದ್ದು, ಮೇ 16ರಂದು ಶಿಖರಕ್ಕೆ ತೈಲಾಭಿಷೇಕ ನೆರವೇರಲಿದೆ. ಮೇ 17 ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts