More

    ಕಲಕೇರಿ ಸಂಗೀತ ವಿದ್ಯಾಲಯ ಮಕ್ಕಳಿಗೆ ನೆರವು

    ಧಾರವಾಡ: ತಾಲೂಕಿನ ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳಿಗೆ ಹುಬ್ಬಳ್ಳಿಯ ಯುನೈಟೆಡ್ ಸೆಕ್ಯುರಿಟಿ ಫೋರ್ಸ್ನ ಎಂಡಿ ಸಂತೋಷ ಇಂಚಲ ಹಾಗೂ ಕುಟುಂಬದವರು ಶನಿವಾರ ಉಚಿತ ಕನ್ನಡಕ ಹಾಗೂ ದಿನಬಳಕೆ ವಸ್ತುಗಳನ್ನು ವಿತರಿಸಿದರು.
    ಹುಬ್ಬಳ್ಳಿಯ ವಿವೇಕಾನಂದ ಜನರಲ್ ಆಸ್ಪತ್ರೆ ಸಹಯೋಗದೊಂದಿಗೆ ಇತ್ತೀಚೆಗೆ ವಿದ್ಯಾಲಯದ ಸುಮಾರು ೨೫೦ಕ್ಕೂ ಹೆಚ್ಚು ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಇದೇವೇಳೆ ಕಣ್ಣಿನ ತಪಾಸಣೆಯನ್ನೂ ಮಾಡಲಾಗಿತ್ತು. ಅಗತ್ಯವುಳ್ಳ ಮಕ್ಕಳಿಗೆ ಕನ್ನಡಕಗಳನ್ನು ಶನಿವಾರ ವಿತರಿಸಲಾಯಿತು.
    ವಿದ್ಯಾಲಯದಲ್ಲಿ ೨೫೦ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಅವರಿಗೆ ದಿನಬಳಕೆ ವಸ್ತುಗಳ ಅಗತ್ಯತೆಯನ್ನು ಅರಿತ ಸಂತೋಷ ಇಂಚಲ, ಸಾಮಾನ್ಯ ಔಷಽ, ಸೋಪ್, ಬಟ್ಟೆ ಸೋಪ್, ಟೂತ್‌ಪೇಸ್ಟ್ ಹಾಗೂ ಬ್ರಶ್‌ಗಳನ್ನು ವಿತರಿಸಿದರು. ಇದೇವೇಳೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಿದ್ದ ಇಂಚಲ ಕುಟುಂಬದವರು, ಮಕ್ಕಳಿಗೆ ಊಟ ಬಡಿಸಿ ಸಹ ಭೋಜನ ಮಾಡಿದರು.
    ಸಂಗೀತ ವಿದ್ಯಾಲಯದ ನಿರ್ದೇಶಕ ಆ್ಯಡಂ ದಾನಿಗಳ ನೆರವನ್ನು ಶ್ಲಾಘಿಸಿದರು. ಸಂಜಯ ಇಂಚಲ, ರೇಣುಕಾ ಇಂಚಲ, ವಿವೇಕಾನಂದ ಜನರಲ್ ಆಸ್ಪತ್ರೆಯ ಡಾ. ಮಂಜುಳಾ ಹುಗ್ಗಿ, ಡಾ. ರಾಹುಲ ಮಂಗೇಕರ, ಸಂಗೀತ ವಿದ್ಯಾಲಯದ ಯಶವಂತ, ಸಂತೋಷ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts