More

    ಅಪ್ಪ ನನ್ನನ್ನು ಕ್ಷಮಿಸಿ… ಕ್ಷುಲ್ಲಕ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡ ಯುವತಿ

    ವಾರಂಗಲ್​: ಉಂಗುರ ಕಳೆದುಕೊಂಡಿದ್ದಕ್ಕೆ ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದ ವಾರಂಗಲ್​ನಲ್ಲಿ ಕಳೆದ ಮಂಗಳವಾರ (ಮಾ.28) ನಡೆದಿದೆ.

    ಮಾದುಲ ಹೇಮಲತಾ ರೆಡ್ಡಿ (19) ಮೃತ ಯುವತಿ. ಈಕೆ ವಾರಂಗಲ್​ನ ಗುನ್ನೆಪಲ್ಲಿ ಗ್ರಾಮದವಳು. ಹನುಮಕೊಂಡದ ಡಿಗ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಳು.

    ಇದನ್ನೂ ಓದಿ: 25ನೇ ಸಿನಿಮಾ ರಿಲೀಸ್ ಶುಭ ಸಂದರ್ಭದಲ್ಲಿ 1 ಕೋಟಿ ರೂ. ಬೆಲೆಬಾಳುವ ಕಾರಿಗೆ ಒಡೆಯನಾದ ಡಾಲಿ!

    ಹೇಮಲತಾ ಯುಗಾದಿಗೆಂದು ಮನೆಗೆ ಬಂದಿದ್ದಳು. ಈ ವೇಳೆ ಆಕೆ ತಂದೆ ಕೊಡಿಸಿದ ಚಿನ್ನದ ಉಂಗುರವನ್ನು ಕಳೆದುಕೊಂಡಿದ್ದಳು. ಪಾಲಕರು ಬೈತಾರೆ ಎಂಬ ಭಯದಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಡೆತ್​ನೋಟ್​ ಬರೆದಿಟ್ಟು ಹೇಮಲತಾ ಸಾವಿನ ಹಾದಿ ಹಿಡಿದಿದ್ದಾಳೆ. ಕ್ಷುಲಕ ಕಾರಣಕ್ಕೆ ಹೇಮಲತಾ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.

    ಮೃತ ಹೇಮಲತಾ ಅವರು ತಂದೆ ಮಾದುಲ ಜಾನಕಿರಾಮುಲು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಎಸ್​ಎಸ್​ಐ ಕುಚುಪುಡಿ ಜಗದೀಶ್​ ಹೇಳಿದ್ದಾರೆ. (ಏಜೆನ್ಸೀಸ್​)

    ತವರಿನಲ್ಲೇ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್ಸ್​: 8 ಮಂದಿ AAP ಕಾರ್ಯಕರ್ತರ ಬಂಧನ

    ಚಲಿಸುವ ಕಾರಿನಲ್ಲಿ ಲೈಂಗಿಕ ದೌರ್ಜನ್ಯ; ನಾಲ್ಕು ಮಂದಿ ಬಂಧನ

    ಅಕಟಕಟಾ ನಟಿಯಿಂದ ಇಂಥಾ ಮಾತಾ! ರಾತ್ರಿ ಪ್ರಯಾಣ ಮಾಡುವಾಗ ಈ ರೀತಿ ಮಾಡ್ತಾರಂತೆ ನಿಮಿಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts