More

    ಕನಕಪುರದಲ್ಲಿ ಡಿ.ಕೆ. ಶಿವಕುಮಾರ್​ ಪರ ಪತ್ನಿ ಉಷಾ ಮತಬೇಟೆ!

    ರಾಮನಗರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅಭ್ಯರ್ಥಿಗಳ ಪರ ಪತ್ನಿ ಮತ್ತು ಮಕ್ಕಳು ಸಹ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಅವರ ಪತ್ನಿ ಚನ್ನಮ್ಮ ಶಿಗ್ಗಾಂವಿಯಲ್ಲಿ ಮತ ಬೇಟೆಯಾಡಿದ್ದರು. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪರ ಅವರ ಪತ್ನಿ ಉಷಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.​

    ಉಷಾ ಅವರು ಕನಕಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹಲಸಿಮರದೊಡ್ಡಿ, ವಾಣಿ ಟಾಕೀಸ್, ಜೆಸಿ ಬಡವಾಣೆಯ ಪ್ರಮುಖ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಗಂಡನ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಉಷಾ ಅವರಿಗೆ ಮಾಜಿ ವಿಧಾನ ಪರಿಷತ್ ಸದಸ್ಯೆ ನಿರ್ಮಲಾ ವೆಂಕಟೇಶ್ ಸಾಥ್ ನೀಡಿದ್ದಾರೆ.

    ಇದನ್ನೂ ಓದಿ: ಐವರು ಕೊರಿಯನ್​ ಮಹಿಳೆಯರ ರೇಪ್​​: ಭಾರತ ಮೂಲದ ಧನಕರ್​ ಫೋನ್​ ನೋಡಿ ದಂಗಾದ ಸಿಡ್ನಿ ಪೊಲೀಸರು

    ಬಿಜೆಪಿಯಿಂದ ಆರ್.ಅಶೋಕ್ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಕನಕಪುರ ಚುನಾವಣಾ ಕಣ ರಂಗೇರಿದೆ. ಅತ್ತ ಡಿಕೆಶಿ ಸಹೋದರ ಡಿ.ಕೆ ಸುರೇಶ್ ಕಾರ್ಯಕರ್ತರ ಸಭೆಗಳಲ್ಲಿ ನಿರತರಾಗಿಯಾಗಿದ್ದಾರೆ.

    ಇನ್ನೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ರಾಜ್ಯ ಪ್ರವಾಸದಲ್ಲಿದ್ದಾರೆ. ಹೀಗಾಗಿ ಪತಿಯ ಗೆಲುವಿಗಾಗಿ ಪತ್ನಿ ಉಷಾ ಅವರು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಸಚಿವ ಕೆ. ಗೋಪಾಲಯ್ಯ

    ಮತದಾರರಿಗೆ ಹತ್ತಿರವಾಗುತ್ತಿರುವ ಸಪ್ತಗಿರಿಗೌಡ: ಗಾಂಧಿನಗರ ಕ್ಷೇತ್ರದಲ್ಲಿ ಮಿಂಚಿನ ಸಂಚಾರ, ಜನರಿಂದ ಜಯಘೋಷ

    ಮಾಜಿ ಪ್ರಧಾನಿ ದೇವೇಗೌಡರ ಕೆಂಗಣ್ಣಿಗೆ ಗುರಿಯಾದ್ರಾ ಮಾಜಿ ಡಿಸಿಎಂ ಪರಮೇಶ್ವರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts