More

    ಸಾಗುವಳಿ ಪತ್ರಕ್ಕೆ ಒತ್ತಾಯಿಸಿ ಶಾಸಕ ಗಣೇಶ್‌ಗೆ ಮನವಿ

    ಕುರುಗೋಡು; ಪಟ್ಟಣದ ಸಿಂಧಿಗೇರಿ ರಸ್ತೆಯಲ್ಲಿರುವ ಮಲ್ಲಪ್ಪನ ಕೆರೆಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜೆ.ಎನ್.ಗಣೇಶ್‌ಗೆ ರೈತರು ಮನವಿ ಸಲ್ಲಿಸಿದರು.

    ಇದನ್ನೂ ಓದಿ:ಬಗರ್ ಹುಕುಂಗೆ ಒಬ್ಬರಿಂದಲೇ 25 ಅರ್ಜಿ! ಸಾಗುವಳಿ ಮಾಡದ ಜಮೀನಿಗೂ ಅರ್ಜಿ!!

    50 ವರ್ಷಗಳಿಂದ ಭೂಮಿಯಲ್ಲಿ 204ರೈತರು ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಅವರಲ್ಲಿ ಬಹುತೇಕರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

    ಮುಂದಿನ ತಿಂಗಳು ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆ ಕುರಿತು ಚರ್ಚೆನಡೆಸಬೇಕು. ಸಾಗುವಳಿ ಪತ್ರ ನೀಡಿ, ಕೆರೆ ಎನ್ನುವ ಪದವನ್ನು ತೆಗೆದುಹಾಕಿ ಸರ್ಕಾರ ಎಂದು ನಮೂದು ಮಾಡಬೇಕು ಎಂದು ಸಂಘದ ಪದಾಧಿಕಾರಿಗಳು ಹಾಗೂ ರೈತರು ಒತ್ತಾಯಿಸಿದರು.

    ಮನವಿ ಸ್ವೀಕರಿಸಿದ ಶಾಸಕ ಜೆಎನ್.ಗಣೇಶ್ ಅಧಿವೇಶನದಲ್ಲಿ ಚರ್ಚೆಸುವುದಾಗಿ ಭರವಸೆ ನೀಡಿದರು. ಮೂಕ ಬಸಪ್ಪ, ಎಚ್.ಸೀನಪ್ಪ, ಎನ್.ಹುಲೆಪ್ಪ, ಎ.ಮಂಜುನಾಥ, ಎಚ್.ಯಂಕಮ್ಮ, ಕಟಿಗೇರು ಬಸವರಾಜ,

    ಎಂ.ಆರ್.ರುದ್ರಪ್ಪ, ಎನ್.ರಾಮಣ್ಣ, ಭೀಮಯ್ಯ, ಶಿವರಾಜ್, ಮಂಜುನಾಥ, ಎನ್.ಬಸವರಾಜ, ಟಿ.ಎನ್.ರುದ್ರಪ್ಪ, ಪಕ್ಕೀರಪ್ಪ, ಎಚ್.ರಾಮಪ್ಪ, ಎಚ್.ಬಸವರಾಜ, ಚಿದಾನಂದ, ಜಟಂಗಿ ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts