ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ರನ್ನು ಭೇಟಿಯಾಗಲು ಬಂದ ಮೊಸಳೆಯೊಂದು ಸೆರೆಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೀಗೆಂದು ನಾವು ಹೇಳುತ್ತಿಲ್ಲ. ಬಳ್ಳಾರಿಯ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ಹೌದು, ಇದು ಒಂದು ರೀತಿಯಲ್ಲಿ ತಮಾಷೆ ಅನ್ನಿಸಬಹುದು, ಆದರೆ, ಕಾಕತಾಳಿಯವೆಂಬಂತೆ ಹೊಸಪೇಟೆಯಲ್ಲಿರುವ ಆನಂದ ಸಿಂಗ್ ಅವರ ಬೃಹತ್ ಬಂಗಲೆ ಮುಂದೆಯೇ ಮೊಸಳೆ ಪ್ರತ್ಯಕ್ಷವಾಗಿದೆ.
ಇದನ್ನೂ ಓದಿ: ಡಿಕೆಶಿಗೆ ಮುಖಭಂಗ; ಕಾಂಗ್ರೆಸ್ಗೆ ರಸಭಂಗ
ಆನಂದ್ ಸಿಂಗ್ ಮನೆಯ ಮುಂದೆ ಹೆಚ್ಎಲ್ಸಿ ಕಾಲುವೆ ಇದೆ. ತಡರಾತ್ರಿ ಕಾಲುವೆಯಿಂದ ಮೊಸಳೆಯು ಮನೆಯ ಮುಂಭಾಗದ ರಸ್ತೆ ಮೇಲೆ ಬಂದಿದೆ. ಇನ್ನೂ ಮೂರು ಮೊಸಳೆ ಕಾಲುವೆಯಲ್ಲಿ ಇದ್ದು, ಅರಣ್ಯ ಇಲಾಖೆ ಹುಡುಕಾಟ ನಡೆಸುತ್ತಿದೆ.
ಸದ್ಯ ರಸ್ತೆಯ ಮೇಲೆ ಬಂದ ಮೊಸಳೆಯನ್ನು ಅರಣ್ಯ ಇಲಾಖೆ ಹಿಡಿದುಕೊಂಡು ಹೋಗಿ, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ. ಈ ವಿಚಾರ ತಿಳಿದ ಅನೇಕರು ಎಲ್ಲೋ ಮೊಸಳೆ ಅರಣ್ಯ ಸಚಿವರ ಬಳಿ ತನ್ನ ಕಷ್ಟ ಹೇಳಿಕೊಳ್ಳೋಕೆ ಬಂದಿತ್ತೇನೋ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಆರ್ಜೆಡಿ-ಕಾಂಗ್ರೆಸ್ ನಿಯೋಗ