ಧಾರವಾಡ: ಇಲ್ಲಿನ ಕರ್ನಾಟಕ ಕಾಲೇಜಿನಲ್ಲಿ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ವಿಭಾಗದ ಸಹಾಯಕ ಉಪನ್ಯಾಸಕ ಡಾ. ಶಿವಲಿಂಗಪ್ಪ ಅಂಗಡಿ ಅವರು ರಚಿಸಿದ ‘ಕ್ರಿಮಿನಲಿಸ್ಟಿಕ್ಸ್’ ಕೃತಿ ಶನಿವಾರ ಬಿಡುಗಡೆ ಮಾಡಲಾಯಿತು.
ಕಾಲೇಜ್ ಪ್ರಾಚಾರ್ಯ ಡಾ. ಜಗದೀಶ ಕಲ್ಯಾಣ ಅವರು ಕೃತಿ ಬಿಡುಗಡೆ ಮಾಡಿದರು. ಡಾ. ಶಿವಲಿಂಗಪ್ಪ ಅಂಗಡಿ, ಡಾ. ಪ್ರಭಾಕರ ಕಾಂಬಳೆ, ಡಾ. ಆರ್.ಎಚ್. ವಾಘ್ಮೋರೆ, ಡಾ. ರಾಮದಾಸ, ಎ.ಎಸ್. ಕಲ್ಲೋಳಿಕರ ಉಪಸ್ಥಿತರಿದ್ದರು.