More

    ಸುತ್ತೂರು ಮಠಕ್ಕೆ ಸಿಪಿವೈ, ಸಿ.ಟಿ.ರವಿ & ಸುರೇಶ್ ಕುಮಾರ್​ ಪ್ರತ್ಯೇಕ ಭೇಟಿ; ಕುತೂಹಲ ಕೆರಳಿಸುತ್ತಿದೆ ಬಿಜೆಪಿ ನಾಯಕರ ನಡೆ

    ಮೈಸೂರು: ಪ್ರಸಿದ್ಧ ಸುತ್ತೂರು ಮಠಕ್ಕೆ ಸಚಿವ ಸಿ.ಪಿ.ಯೋಗೀಶ್ವರ್​ ಮಂಗಳವಾರದಂದು ಭೇಟಿ ನೀಡಿದ್ದಾರೆ. ಭದ್ರತಾ ವಾಹನ, ಗನ್​ಮ್ಯಾನ್​ ಇಲ್ಲದೆಯೇ ಖಾಸಗಿ ವಾಹನದಲ್ಲಿ ಮಠಕ್ಕೆ ಬಂದ ಸಚಿವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.

    ಮಂಗಳವಾರ ದಿಢೀರ್​ ಎಂದು ಮೈಸೂರಿಗೆ ಪ್ರಯಾಣ ಬೆಳೆಸಿದ ಸಿಪಿವೈ ಸ್ವಾಮೀಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಯಾವ ವಿಚಾರದಲ್ಲಿ ಚರ್ಚೆಯಾಗಿದೆ ಎನ್ನುವುದು ತಿಳಿದುಬಂದಿಲ್ಲ.

    ಅಂದ ಹಾಗೆ ಸಿ.ಪಿ.ಯೋಗೀಶ್ವರ್​ ಸುತ್ತೂರು ಮಠಕ್ಕೆ ತೆರಳುವ ಕೆಲವು ಹೊತ್ತಿನ ಮೊದಲು ಸಿ.ಟಿ.ರವಿ ಕೂಡ ಸ್ವಾಮೀಜಿಯನ್ನು ಭೇಟಿ ಮಾಡಿದ್ದರು. ಸಿ.ಟಿ. ರವಿ ನಂತರ ಸಚಿವ ಸುರೇಶ್​ ಕುಮಾರ್​ ಅವರೂ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ರೀತಿ ಒಂದೇ ಸಮಯದಲ್ಲಿ ಬಿಜೆಪಿಯ ಮೂರು ನಾಯಕರು ಸ್ವಾಮೀಜಿಯನ್ನು ಭೇಟಿ ಮಾಡಿರುವುದು ಅನೇಕರಲ್ಲಿ ಕುತೂಹಲ ಕೆರಳಿಸಿದೆ.

    ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ

    ಚೀನಾದಲ್ಲಿ ಮನುಷ್ಯರಿಗೂ ಹಬ್ಬಲಾರಂಭಿಸಿತು ಹಕ್ಕಿಜ್ವರ! ಇದು ವಿಶ್ವದಲ್ಲೇ ಮೊದಲು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts