ಮೈಸೂರು: ಪ್ರಸಿದ್ಧ ಸುತ್ತೂರು ಮಠಕ್ಕೆ ಸಚಿವ ಸಿ.ಪಿ.ಯೋಗೀಶ್ವರ್ ಮಂಗಳವಾರದಂದು ಭೇಟಿ ನೀಡಿದ್ದಾರೆ. ಭದ್ರತಾ ವಾಹನ, ಗನ್ಮ್ಯಾನ್ ಇಲ್ಲದೆಯೇ ಖಾಸಗಿ ವಾಹನದಲ್ಲಿ ಮಠಕ್ಕೆ ಬಂದ ಸಚಿವರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ದಿಢೀರ್ ಎಂದು ಮೈಸೂರಿಗೆ ಪ್ರಯಾಣ ಬೆಳೆಸಿದ ಸಿಪಿವೈ ಸ್ವಾಮೀಜಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಯಾವ ವಿಚಾರದಲ್ಲಿ ಚರ್ಚೆಯಾಗಿದೆ ಎನ್ನುವುದು ತಿಳಿದುಬಂದಿಲ್ಲ.
ಅಂದ ಹಾಗೆ ಸಿ.ಪಿ.ಯೋಗೀಶ್ವರ್ ಸುತ್ತೂರು ಮಠಕ್ಕೆ ತೆರಳುವ ಕೆಲವು ಹೊತ್ತಿನ ಮೊದಲು ಸಿ.ಟಿ.ರವಿ ಕೂಡ ಸ್ವಾಮೀಜಿಯನ್ನು ಭೇಟಿ ಮಾಡಿದ್ದರು. ಸಿ.ಟಿ. ರವಿ ನಂತರ ಸಚಿವ ಸುರೇಶ್ ಕುಮಾರ್ ಅವರೂ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಈ ರೀತಿ ಒಂದೇ ಸಮಯದಲ್ಲಿ ಬಿಜೆಪಿಯ ಮೂರು ನಾಯಕರು ಸ್ವಾಮೀಜಿಯನ್ನು ಭೇಟಿ ಮಾಡಿರುವುದು ಅನೇಕರಲ್ಲಿ ಕುತೂಹಲ ಕೆರಳಿಸಿದೆ.
ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ
ಚೀನಾದಲ್ಲಿ ಮನುಷ್ಯರಿಗೂ ಹಬ್ಬಲಾರಂಭಿಸಿತು ಹಕ್ಕಿಜ್ವರ! ಇದು ವಿಶ್ವದಲ್ಲೇ ಮೊದಲು…