ನವದೆಹಲಿ: ಸೆಪ್ಟೆಂಬರ್ನಿಂದ ಮಕ್ಕಳಿಗೂ ಕರೊನಾ ಲಸಿಕೆ ನೀಡುವ ಕೆಲಸ ಆರಂಭವಾಗುವ ಸಾಧ್ಯತೆ ಇದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ತಿಳಿಸಿದ್ದು, ಕರೊನಾ ಸರಪಳಿಗೆ ಬ್ರೇಕ್ ಹಾಕಲು ಲಸಿಕೆ ಪ್ರಮುಖವಾಗಿರಲಿದೆ ಎಂದು ಉಲ್ಲೇಖಿಸಿದ್ದಾರೆ.
ಜೈಡಸ್ ಕಂಪನಿ ಈಗಾಗಲೇ ಲಸಿಕಾ ಟ್ರಯಲ್ ಮುಗಿಸಿ, ತುರ್ತು ದೃಢೀಕರಣಕ್ಕೆ ಕಾಯುತ್ತಿದೆ ಎಂದು ಭಾವಿಸಿದ್ದೇನೆ. ಭಾರತ್ ಬಯೋಟೆಕ್ನ ಕೋವಾಕ್ಸಿನ್ ಟ್ರಯಲ್ಸ್ ಆಗಸ್ಟ್ ಅಥವಾ ಸೆಪ್ಟೆಂಬರ್ಗೆ ಮುಗಿಯಲಿದ್ದು, ಬಳಿಕ ಅನುಮೋದನೆ ಪಡೆದುಕೊಳ್ಳಲಿದೆ.
ಫೈಜರ್ ಲಸಿಕೆಗೆ ಈಗಾಗಲೇ ಯುಸ್ ರೆಗ್ಯುಲೇಟರ್ ಎಫ್ಡಿಎ (ಆಹಾರ ಮತ್ತು ಔಷಧ ಆಡಳಿತ) ಅನುಮೋದನೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ ಆರಂಭದಲ್ಲಿ ಕರೊನಾ ಮಕ್ಕಳಿಗೆ ಕರೊನಾ ಲಸಿಕೆ ಆರಂಭವಾಗಲಿದೆ ಎಂಬ ಭರವಸೆ ಇದೆ ಮತ್ತು ಈ ಲಸಿಕಾ ಅಭಿಯಾನ ಕರೊನಾ ಸರಪಳಿಯನ್ನು ಬ್ರೇಕ್ ಮಾಡಲು ದೊಡ್ಡ ಮಟ್ಟದ ಉತ್ತೇಜನವನ್ನು ನೀಡಲಿದೆ ಎಂದು ಡಾ. ಗುಲೇರಿಯಾ ಹೇಳಿದ್ದಾರೆ.
ಭಾರತದಲ್ಲಿ ಈವರೆಗೆ 42 ಕೋಟಿಗೂ ಅಧಿಕ ಲಸಿಕೆಯನ್ನು ನೀಡಲಾಗಿದೆ. ಈ ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಆದಾಗ್ಯೂ, ಮೂರನೇ ಅಲೆ ಭೀತಿ ಇದ್ದು, ಆದಷ್ಟು ಬೇಗ ಮಕ್ಕಳಿಗೆ ಕರೊನಾ ಲಸಿಕೆ ಕಾರ್ಯ ಆರಂಭಿಸುವ ಕೆಲಸ ಆಗಬೇಕಿದೆ ಎಂದಿದ್ದಾರೆ. (ಏಜೆನ್ಸೀಸ್)
VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್ಮೆನ್!
ಕೇರಳದ ಮೊದಲ ತೃತೀಯಲಿಂಗಿ ರೇಡಿಯೋ ಜಾಕಿ ಸಾವಿನ ಬೆನ್ನಲ್ಲೇ ಶವವಾಗಿ ಪತ್ತೆಯಾದ ಸ್ನೇಹಿತ!
ಭಗವಾನ್ ಬುದ್ಧನ ಬೋಧನೆಗಳು ಕರೊನಾ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತ: ಪ್ರಧಾನಿ ಮೋದಿ