ಭಗವಾನ್ ಬುದ್ಧನ ಬೋಧನೆಗಳು ಕರೊನಾ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತ: ಪ್ರಧಾನಿ ಮೋದಿ

ನವದೆಹಲಿ: ಭಗವಾನ್ ಬುದ್ಧನ ಬೋಧನೆಗಳು ಕರೊನಾ ವೈರಸ್​ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ ಎಂಬ ಸಂದೇಶದೊಂದಿಗೆ ಪ್ರಧಾನಿ ಮೋದಿ ದೇಶದ ಜನತೆಗೆ ಗುರು ಪೂರ್ಣಿಮೆಯ ಶುಭಕೋರಿದರು. ಆಷಾಢ ಪುರ್ಣಿಮಾ-ಧಮ್ಮ ಚಕ್ರ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬುದ್ಧನ ಬೋಧನೆ ಮತ್ತು ಮೌಲ್ಯಗಳ ಪ್ರಭಾವವನ್ನು ಉಲ್ಲೇಖಿಸಿದರು. ಇಂದು ಮಾನವೀಯತೆ ಕೋವಿಡ್​ನಿಂದ ಬಿಕ್ಕಟ್ಟು ಎದುರಿಸುತ್ತಿದೆ. ಇಂದಿನ ದಿನದಲ್ಲಿ ಭಗವಾನ್​ ಬುದ್ಧ ಹೆಚ್ಚು ಪ್ರಸ್ತುತರಾಗಿದ್ದಾರೆ. ಬುದ್ಧನ ದಾರಿಯಲ್ಲಿ ನಡೆದು ಅತ್ಯಂತ ದೊಡ್ಡ ಸವಾಲನ್ನು ಹೇಗೆ … Continue reading ಭಗವಾನ್ ಬುದ್ಧನ ಬೋಧನೆಗಳು ಕರೊನಾ ಸಾಂಕ್ರಮಿಕ ಕಾಲದಲ್ಲಿ ಹೆಚ್ಚು ಪ್ರಸ್ತುತ: ಪ್ರಧಾನಿ ಮೋದಿ