ಜೈಪುರ: COVID-19 ವಿರುದ್ಧದ ಹೋರಾಟದಲ್ಲಿ ಸಮಾಜವು ಒಟ್ಟಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮುಂಬರುವ ಪೀಳಿಗೆಗೆ ಅರಿವು ಮೂಡಿಸಲು ಶಾಲಾ ಪಠ್ಯಕ್ರಮದಲ್ಲಿ ಕರೊನಾವೈರಸ್ ಕುರಿತ ಅಧ್ಯಾಯವನ್ನು ಶಾಲಾ ಪಠ್ಯಕ್ರಮದಲ್ಲಿ ಪರಿಚಯಿಸಬೇಕು ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.
“ಲಾಕ್ಡೌನ್ ಸಮಯದಲ್ಲಿ ನಾವು ಅನುಭವಿಸಿದ ಸಮಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಇದು 100 ವರ್ಷಗಳ ಇತಿಹಾಸದಲ್ಲೇ ವಿಶ್ವದಲ್ಲೇ ಕಂಡುಬಂದ ಮೊದಲ ಸಾಂಕ್ರಾಮಿಕ ರೋಗವಾಗಿದೆ. ಆದ್ದರಿಂದ ಮುಂಬರುವ ಪೀಳಿಗೆಗೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವಂತೆ ಮಾಡಬೇಕು. ಎಂದು ಅವರು ಶನಿವಾರ ಹೇಳಿದರು.
ಇದನ್ನು ಓದಿ: ಈ ರಾಜ್ಯದಲ್ಲಿ ಮಾಸ್ಕ್ ಧರಿಸದೇ ಇದ್ದರೆ ಬೀಳುತ್ತೆ 10 ಸಾವಿರ ರೂಪಾಯಿ ಜುಲ್ಮಾನೆ
“1920 ರಲ್ಲಿ ಸ್ಪ್ಯಾನಿಷ್ ಜ್ವರ ವರದಿಯಾಗಿದ್ದರೆ ಮತ್ತು ಅದರ ಮೇಲೆ ಒಂದು ಪುಸ್ತಕ ಲಭ್ಯವಿದ್ದರೆ, ಆರೋಗ್ಯ ಸವಾಲಿನ ವಿರುದ್ಧ ಹೋರಾಡಲು ನಾವು ಸಲಹೆಗಳು ಮತ್ತು ತಂತ್ರಗಳನ್ನು ಕಲಿಯಬಹುದಿತ್ತು. ಈಗ, ನಾವು COVID ವಿರುದ್ಧ ಹೇಗೆ ಹೋರಾಡಿದ್ದೇವೆಂದು ತಿಳಿಯಲು ಮತ್ತು ಹೇಗೆ ಸವಾಲನ್ನು ಒಗ್ಗಟ್ಟಿನಿಂದ ಎದುರಿಸಿ ತಿಂಗಳುಗಟ್ಟಲೆ ಲಾಕ್ಡೌನ್ ನಲ್ಲಿ ಹೇಗೆ ಇದ್ದೆವೆಂದು ತಿಳಿಸಲು ಹೊಸ ಪೀಳಿಗೆಗೆ ಪುಸ್ತಕ ಲಭ್ಯವಾಗುವಂತೆ ನಾವು ವ್ಯವಸ್ಥೆ ಮಾಡಬೇಕು ಎಂದರು.
ರಾಜ್ಯ ಆರೋಗ್ಯ ಇಲಾಖೆಯು ದಿನಕ್ಕೆ 41,000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ ಮತ್ತು ಸರ್ಕಾರದ ಉತ್ತಮ ವ್ಯವಸ್ಥೆಗಳಿಂದಾಗಿ ಕರೊನಾ ರೋಗಿಗಳ ಚೇತರಿಕೆ ಪ್ರಮಾಣ ಶೇಕಡಾ 80 ಕ್ಕೆ ತಲುಪಿದೆ ಎಂದು ಸಚಿವರು ಹೇಳಿದರು. ರಾಜ್ಯದ ಒಟ್ಟು 19,256 ಪ್ರಕರಣಗಳಲ್ಲಿ 15,352 ರೋಗಿಗಳು ಚೇತರಿಸಿಕೊಂಡು, ಬಿಡುಗಡೆಗೊಂಡಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಧರ್ಮಗುರುವಿನ ಅಂತ್ಯಕ್ರಿಯೆಯಲ್ಲಿ 10ಸಾವಿರ ಮಂದಿ ಭಾಗಿ; ಸುತ್ತಲಿನ 3 ಹಳ್ಳಿ ಸಂಪೂರ್ಣ ಲಾಕ್
ಸರ್ಕಾರವು ಮಾಡಿದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಮತ್ತು ಹೋಮ್ ಕ್ವಾರಂಟೈನ್ ಮೂಲಕ ಜನರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ರಾಜ್ಯದ ಮೊದಲ ಕರೊನಾ ಪ್ರಕರಣ ಬೆಳಕಿಗೆ ಬಂದಾಗ, ಮಾದರಿಯನ್ನು ಪರೀಕ್ಷೆಗೆ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ಆರೋಗ್ಯ ಸಚಿವರು ಹೇಳಿದರು. ಕರೊನಾವೈರಸ್ ವಿರುದ್ಧ ಹೋರಾಡಲು ರಾಜಸ್ಥಾನವು ವಿವಿಧ ಸ್ಥಳಗಳಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ,
ಆಗಸ್ಟ್ 22 ರಂದು ನಡೆಯಲಿರುವ ಸಿಎಲ್ಎಟಿ ಪರೀಕ್ಷೆ ಹೀಗಿರಲಿದೆ..