ಮುಂಬೈ: ಕರೊನಾ ವೈರಸ್ ಲಾಕ್ಡೌನ್ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಆಗಮಿಸಿದ್ದ 20 ವಿದೇಶಿ ತಬ್ಲಿಘಿಗಳನ್ನು ಬಿಡುಗಡೆ ಮಾಡುವಂತೆ ಮುಂಬೈ ಕೋರ್ಟ್ ಆದೇಶಿಸಿದೆ. ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ಆರ್.ಖಾನ್ ಈ ಆದೇಶ ನೀಡಿದ್ದಾರೆ.
ತಬ್ಲಿಘಿಗಳ ವಿರುದ್ಧ ಹೊರಿಸಿದ್ದ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಒದಗಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿವೆ. ಸಂದೇಹದ ಹೆಸರಿನಲ್ಲಿ ಬಹಳ ಕಾಲ ಯಾರನ್ನೂ ಬಂಧನದಲ್ಲಿ ಇರಿಸಲಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಒಮ್ಮೆ ಗುಣವಾದವರಲ್ಲಿ ಮತ್ತೆ ಕರೊನಾ ಸೋಂಕು ಪತ್ತೆಯಾಗಬಹುದು; ಏಕೆಂದರೆ…
ದಾಖಲೆಗಳಲ್ಲಿ ಇರುವ ಆರೋಪಗಳಿಗೂ ಸಾಕ್ಷ್ಯಗಳಿಗೂ ತಾಳ-ಮೇಳವಿಲ್ಲ. ಕಾನೂನು ಬದ್ಧವಾಗಿರುವ ಸಾಕ್ಷ್ಯಗಳೂ ಇರಲಿಲ್ಲ. ಪ್ರಾಸಿಕ್ಯೂಶನ್ ಸಾಕ್ಷ್ಯದ ಪ್ರಕಾರ ಆರೋಪಿಗಳು ಲಾಕ್ಡೌನ್ ನಿಯಮಗಳನ್ನು ಮತ್ತು ಪೊಲೀಸ್ ಕಮಿಷನರ್ ಆದೇಶವನ್ನು ಉಲ್ಲಂಘಿಸಿಲ್ಲ ಎಂಬುದು ದಾಖಲೆಯಲ್ಲಿದೆ. ಸಾಕ್ಷಿಗಳಿಗೂ ಆರೋಪಿಗಳ ಮೇಲಿನ ಆರೋಪವನ್ನು ವಿವರಿಸುವಲ್ಲಿ ವಿಫಲವಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: ಟ್ರಾಫಿಕ್ನಿಂದ ತಪ್ಪಿಸಿಕೊಳ್ಳಲು ಅಕ್ಷಯ್ ಮಾಡಿದ ಐಡಿಯಾ ಹೇಗಿದೆ ನೋಡಿ…
ಈ ತಬ್ಲಿಘಿಗಳ ಎರಡು ತಂಡದ ವಿರುದ್ಧ ಏಪ್ರಿಲ್ನಲ್ಲಿ ಕೇಸ್ ದಾಖಲಾಗಿತ್ತು. (ಏಜೆನ್ಸೀಸ್ )
ರಾಷ್ಟ್ರಪತಿ ಕೈಗೆ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ರೆಫರೆಂಡಂ: ಸುಪ್ರೀಂ ಕೋರ್ಟ್ ನಿರ್ದೇಶನ