More

    ಕೋರ್ಟ್​ ಕಲಾಪದ ವೇಳೆ ವಕೀಲರನ್ನು ಮೂದಲಿಸಿದ ಸಾಕ್ಷಿದಾರನಿಗೆ ಒಂದು ದಿನ ಸೆರೆವಾಸ ಶಿಕ್ಷೆ ವಿಧಿಸಿದ ನ್ಯಾಯಾಧೀಶರು

    ಶಿವಮೊಗ್ಗ: ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ ವಕೀಲರನ್ನು ಸಾಕ್ಷಿದಾರನೊಬ್ಬ ನೀವು ಪಾಕಿಸ್ತಾನದವರು ಎಂದು ಅವಹೇಳನ ಮಾಡಿರುವ ಘಟನೆ ನಡೆದಿದೆ.

    ನಗರದ 3ನೇ ಜೆಎಂಎಫ್​ಸಿ ಕೋರ್ಟ್​ ಹಾಲ್​ನಲ್ಲಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್​ ಅವರು ಕೇಸು ವಿಚಾರಣೆ ನಡೆಸುತ್ತಿದ್ದರು.

    ಕೋರ್ಟ್​ ಕಲಾಪದ ವೇಳೆ ವಕೀಲರನ್ನು ಮೂದಲಿಸಿದ ಸಾಕ್ಷಿದಾರನಿಗೆ ಒಂದು ದಿನ ಸೆರೆವಾಸ ಶಿಕ್ಷೆ ವಿಧಿಸಿದ ನ್ಯಾಯಾಧೀಶರುಹೊಡೆದಾಟ ಕೇಸಿಗೆ ಸಂಬಂಧಿಸಿದಂತೆ ಸಾಕ್ಷಿ ನುಡಿಯಲು ಬಂದಿದ್ದ ಭದ್ರಾವತಿ ತಾಲೂಕಿನ ಸಿದ್ಲಿಪುರದ ಶಂಕರ್​ ಎಂಬುವವರು ವಕೀಲ ನಯಾಜ್​ ಅಹಮ್ಮದ್​ ಅವರನ್ನು ನೀವು ಪಾಕಿಸ್ತಾನದವರು ಎಂದು ಮೂದಲಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು. ಸಿಡಿಮಿಡಿಗೊಂಡ ನ್ಯಾಯಾಧೀಶರು ಕೋರ್ಟ್​ ಕಲಾಪಕ್ಕೆ ಅಡ್ಡಿ ಹಾಗೂ ಅನುಚಿತ ವರ್ತನೆ ತೋರಿದ್ದಕ್ಕೆ ಶಂಕರ್​ಗೆ ಒಂದು ದಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.

    ಕೂಡಲೇ ಪೊಲೀಸರು ಶಂಕರ್​ ಅವರನ್ನು ಕರೆದೊಯ್ದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts