ಶಿವಮೊಗ್ಗ: ನ್ಯಾಯಾಲಯದ ಕಲಾಪ ನಡೆಯುತ್ತಿದ್ದ ವೇಳೆ ವಕೀಲರನ್ನು ಸಾಕ್ಷಿದಾರನೊಬ್ಬ ನೀವು ಪಾಕಿಸ್ತಾನದವರು ಎಂದು ಅವಹೇಳನ ಮಾಡಿರುವ ಘಟನೆ ನಡೆದಿದೆ.
ನಗರದ 3ನೇ ಜೆಎಂಎಫ್ಸಿ ಕೋರ್ಟ್ ಹಾಲ್ನಲ್ಲಿ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್ ಅವರು ಕೇಸು ವಿಚಾರಣೆ ನಡೆಸುತ್ತಿದ್ದರು.
ಹೊಡೆದಾಟ ಕೇಸಿಗೆ ಸಂಬಂಧಿಸಿದಂತೆ ಸಾಕ್ಷಿ ನುಡಿಯಲು ಬಂದಿದ್ದ ಭದ್ರಾವತಿ ತಾಲೂಕಿನ ಸಿದ್ಲಿಪುರದ ಶಂಕರ್ ಎಂಬುವವರು ವಕೀಲ ನಯಾಜ್ ಅಹಮ್ಮದ್ ಅವರನ್ನು ನೀವು ಪಾಕಿಸ್ತಾನದವರು ಎಂದು ಮೂದಲಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದರು. ಸಿಡಿಮಿಡಿಗೊಂಡ ನ್ಯಾಯಾಧೀಶರು ಕೋರ್ಟ್ ಕಲಾಪಕ್ಕೆ ಅಡ್ಡಿ ಹಾಗೂ ಅನುಚಿತ ವರ್ತನೆ ತೋರಿದ್ದಕ್ಕೆ ಶಂಕರ್ಗೆ ಒಂದು ದಿನ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಕೂಡಲೇ ಪೊಲೀಸರು ಶಂಕರ್ ಅವರನ್ನು ಕರೆದೊಯ್ದರು. (ದಿಗ್ವಿಜಯ ನ್ಯೂಸ್)