More

    ಭ್ರಷ್ಟಾಚಾರ ಪ್ರಕರಣ: ಮುಖ್ಯಮಂತ್ರಿಯಿಂದ ವಜಾಗೊಂಡ ಬೆನ್ನಲ್ಲೇ ಬಂಧನಕ್ಕೊಳಗಾದ ಪಂಜಾಬ್​ ಆರೋಗ್ಯ ಸಚಿವ

    ಚಂಡಿಘಢ: ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಗ್ಯ ಸಚಿವನನ್ನು ಮುಖ್ಯಮಂತ್ರಿ ಭಗವಂತ ಮಾನ್​ ವಜಾಗೊಳಿಸಿದ ಬೆನ್ನಲ್ಲೇ ಪೊಲೀಸರು ಬಂಧಿಸಿದ್ದಾರೆ.

    ಪಂಜಾಬ್​ನ ಆರೋಗ್ಯ ಸಚಿವರಾಗಿದ್ದ ವಿಜಯ್​ ಸಿಂಗ್ಲಾ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ವಜಾಗೊಳಿಸಿದ್ದರು.

    ಪ್ರತಿ ಟೆಂಡರ್​​ ಪಡೆಯುವಾಗಲೂ ಶೇ.1 ರಷ್ಟು ಕಮಿಷನ್​​ ಸಚಿವರಿಗೆ ಹೋಗಲೇ ಬೇಕಿತ್ತು. ಈ ಆರೋಪ ಕೇಳಿಬಂದದ್ದರಿಂದ ಸಿಎಂ ವಜಾಗೊಳಿಸಿದ್ದರು. ಇನ್ನು ಪಂಜಾಬ್​​ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಸಚಿವರನ್ನು ವಶಕ್ಕೆ ಪಡೆದಿದ್ದಾರೆ.

    10 ದಿನಗಳ ಹಿಂದೆ ಮುಖ್ಯಮಂತ್ರಿಗೆ ಈ ಬಗ್ಗೆ ದೂರು ನೀಡಲಾಗಿತ್ತು. ದೇಶದಲ್ಲೇ ಮುಖ್ಯಮಂತ್ರಿಯೊಬ್ಬರು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಂಡ 2ನೇ ಪ್ರಕರಣ ಇದಾಗಿದೆ. 2015ರಲ್ಲಿ ಅರವಿಂದ್ ಕೇಜ್ರಿವಾಲ್​ ಅವರು ಸಹ ಭ್ರಷ್ಟಾಚಾರ ಪ್ರಕರಣದಲ್ಲಿ ಸಚಿವನೊಬ್ಬನನ್ನು ವಜಾಗೊಳಿಸಿದ್ದರು.

    ಮುಖ್ಯಮಂತ್ರಿಗೆ ದೂರು ಬಂದ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ತಂಡ ರಚಿಸಿ ಸಚಿವರ ಭ್ರಷ್ಟಾಚಾರವನ್ನು ಬಯಲಿಗೆಳೆಯಲಾಗಿತ್ತು. ಇದೀಗ ಅವರ ವಿರುದ್ಧ ಭ್ರಷ್ಟಾಚಾರ ನಡೆಸಿರುವುದು ನಿಖರ ಮಾಹಿತಿ ತಿಳಿದಿದ್ದರಿಂದ ಪೊಲೀಸರೇ ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಲಾಗಿದೆ. (ಏಜೆನ್ಸೀಸ್​)

    ನಿಂತಿದ್ದ ಅಟೋ ಮೇಲೆಯೇ ಬಿತ್ತು ಬೃಹತ್​ ಗಾತ್ರದ ಮರ: ಇಬ್ಬರಿಗೆ ಗಂಭೀರ ಗಾಯ, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ಹೈವೆಯಲ್ಲಿ ಬೈಕ್​ಗಳಿಗೂ ಟೋಲ್​​ ಫಿಕ್ಸ್​​: ಈ ಬಗ್ಗೆ ಸಂಸದ ಪ್ರತಾಪ್​​ ಸಿಂಹ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts