ಬೆಂಗಳೂರು: ಮಹಾಮಾರಿ ಕರೊನಾ ವೈರಸ್ನಿಂದ ಇನ್ನೇನು ಬಿಡುಗಡೆ ಹೊಂದಲಿದ್ದೇವೆ ಎನ್ನುವ ನಿರೀಕ್ಷೆಯಲ್ಲಿದ್ದ ರಾಜ್ಯದ ಜನರಿಗೆ ರಾಜ್ಯ ಕರೊನಾ ಟಾಸ್ಕ್ ಫೋರ್ಸ್ ನೀಡಿರುವ ವರದಿ ಆಘಾತ ಉಂಟುಮಾಡಿದೆ.
ಇದನ್ನೂ ಓದಿ: ಭಾರತ-ಚೀನಾ ಗಡಿ ಘರ್ಷಣೆ: ಪ್ರಧಾನಿ ಮೋದಿಗೆ ಕರೆ ಮಾಡಿ ಡೊನಾಲ್ಡ್ ಟ್ರಂಪ್ ಚರ್ಚಿಸಿದ್ದೇನು?
ದೇಶ ಹಾಗೂ ರಾಜ್ಯದಲ್ಲಿ ಸದ್ಯಕ್ಕೆ ಕರೊನಾಸುರ ತನ್ನ ಅಟ್ಟಹಾಸವನ್ನು ಕಡಿಮೆ ಮಾಡುವುದಿಲ್ಲ ಎಂಬುದು ತಿಳಿದುಬಂದಿದೆ. ಡಿಸೆಂಬರ್ ವೇಳೆಗೆ ಕರೊನಾ ವೈರಸ್ ಸೋಂಕು ಹೆಚ್ಚಾಗಲಿದ್ದು, ದೇಶದ ಅರ್ಧಕ್ಕರ್ಧ ಜನರಿಗೆ ಸೋಂಕು ತಗುಲುವುದು ಗ್ಯಾರೆಂಟಿ ಎಂದು ರಾಜ್ಯ ಹೆಲ್ತ್ ಟಾಸ್ಕ್ ಫೋರ್ಸ್ ನ್ಯೂಡಲ್ ಅಧಿಕಾರಿ ಡಾ. ರವಿ ಅವರು ದಿಗ್ವಿಜಯ ನ್ಯೂಸ್ಗೆ ಮಾಹಿತಿ ನೀಡಿದ್ದಾರೆ.
ಮತ್ತೊಂದು ಶಾಕಿಂಗ್ ವಿಚಾರವೇನೆಂದರೆ ಬಹುತೇಕ ಜನರಲ್ಲಿ ಸೋಂಕು ತಿಳಿಯುವುದೇ ಇಲ್ಲವಂತೆ. 4ನೇ ಹಂತದ ಲಾಕ್ಡೌನ್ ಮೇ 31ಕ್ಕೆ ಮುಗಿಯಲಿದ್ದು, ಆ ಬಳಿಕ ಕರೊನಾ ವೈರಸ್ ಸಮುದಾಯ ಪ್ರಸರಣವಾಗುವುದರೊಂದಿಗೆ ಜೂನ್ ನಂತರ ಸೋಂಕಿನ ಪ್ರಕರಣಗಳು ದ್ವಿಗುಣವಾಗುವ ಸಾಧ್ಯತೆ ಇದೆ ಎಂದು ರವಿ ಅವರು ತಿಳಿಸಿದ್ದಾರೆ.
ಖುಷಿ ವಿಚಾರವೂ ಇದೆ
ಶ್ವಾಸಕೋಸಗಳಿಗೆ ಹಾನಿ ಉಂಟುಮಾಡುವ ವೈರಸ್ಗಳು ಈಗಾಗಲೇ ಸಾಕಷ್ಟು ಬಂದಿವೆ. ಇದು ಕೂಡ ಹಾಗೇ, ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹೋಗುತ್ತದೆ. ಗುಡ್ ನ್ಯೂಸ್ ಏನೆಂದರೆ, ಈ ಸೋಂಕು ಶೇ. 90 ರಷ್ಟು ಜನರಿಗೆ ಬಂದಿದ್ದು ಗೊತ್ತಾಗುವುದಿಲ್ಲ ಹಾಗೂ ಹೋಗುವುದು ಗೊತ್ತಾಗುವುದಿಲ್ಲ ಎಂದರು.
ಇದನ್ನೂ ಓದಿ: ನರೇಗಾ ಅಕ್ರಮ, 43 ನೌಕರರಿಗೆ ಶಿಕ್ಷೆ ಖಾತ್ರಿ: 18 ಸಿಬ್ಬಂದಿ ವಜಾ, 9 ಪಿಡಿಒಗಳ ಸಸ್ಪೆಂಡ್
ಸೋಂಕು ತಡೆಗಟ್ಟುವುದು ಸರ್ಕಾರದ ಜವಾಬ್ದಾರಿಯಲ್ಲ. ಜನರ ಜವಾಬ್ದಾರಿಯಾಗಿದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಿದೆ. ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಬಳಕೆ ಸೇರಿದಂತೆ ಅನೇಕ ಉಪಕ್ರಮಗಳನ್ನು ತೆಗೆದುಕೊಂಡು ಸೋಂಕು ತಗುಲುವ ಪ್ರಮಾಣವನ್ನು ತಗ್ಗಿಸಬೇಕೆಂದು ಡಾ. ರವಿ ಸಲಹೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)