ಮೂಡಲಗಿ: ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಕರೊನಾ ಸೇನಾನಿಗಳಿಗೆ ಭೋಜನ ವ್ಯವಸ್ಥೆ ಮಾಡಿದ್ದರು. ಈ ವೇಳೆ ಕಪ್ಪಲಗುದ್ದಿ ಮಾತನಾಡಿ, ಕಲ್ಲೋಳಿಯಲ್ಲಿ ಪಪಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಂದಾಯ ಇಲಾಖೆ, ಪಶುವೈದ್ಯಕೀಯ ಇಲಾಖೆ, ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಒಂದೂವರೆ ತಿಂಗಳಿಂದ ತಮ್ಮ ಆರೋಗ್ಯ ಲೆಕ್ಕಿಸದೇ ಕರೊನಾ ಸೋಂಕು ನಿಯಂತ್ರಣಕ್ಕೆ ಹೋರಾಡುತ್ತಿದ್ದಾರೆ. ಅವರನ್ನು ಅಭಿನಂದಿಸಲು ಈ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದರು. ಪಪಂ ಮುಖ್ಯಾಧಿಕಾರಿ ಅರುಣಕುಮಾರ, ಭೋಜನ ವ್ಯವಸ್ಥೆ ಮಾಡಿದ ನೀಲಕಂಠ ಕಪ್ಪಲಗುದ್ದಿ ಅವರನ್ನು ಅಭಿನಂದಿಸಿದರು. ಸುಭಾಸ ಕುರಬೇಟ, ಪಪಂ ಸದಸ್ಯ ಬಸವರಾಜ ಯಾದಗೂಡ, ದಿ. ಕಲ್ಲೋಳಿ ಸೌಹಾರ್ದ ಸಹಕಾರಿ ವ್ಯವಸ್ಥಾಪಕ ರಾಮಣ್ಣ ಕಂಕಣವಾಡಿ, ಬಸವರಾಜ ಕಪ್ಪಲಗುದ್ದಿ, ಸಿಬ್ಬಂದಿ ಇದ್ದರು.