More

    ದೇಶದಲ್ಲಿ ಶೀಘ್ರವೇ ‘ಕರೊನಾ ಕರ್ಫ್ಯೂ’!?; ಸೋಂಕು ತಡೆಗೆ ಮುಂದಾದ್ರು ಪ್ರಧಾನಿ ಮೋದಿ

    ನವದೆಹಲಿ: ‘ನಾವೆಲ್ಲ ಮತ್ತೊಮ್ಮೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಆದರೆ ಈ ಸಲ ನಮ್ಮೊಂದಿಗೆ ಅನುಭವವಿದೆ, ಸಂಪನ್ಮೂಲಗಳಿವೆ ಜತೆಗೆ ಲಸಿಕೆಯೂ ಇದೆ..’
    – ಹೀಗೆಂದವರು ಪ್ರಧಾನಮಂತ್ರಿ ನರೇಂದ್ರ ಮೋದಿ.
    ದೇಶಾದ್ಯಂತ ಕರೊನಾ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ ಪ್ರಧಾನಿ ಮೋದಿ, ಈ ಮಾತನ್ನು ಹೇಳಿದರು.

    ಈಗ ಸವಾಲಿನ ಪರಿಸ್ಥಿತಿ ಮತ್ತೊಮ್ಮೆ ಸೃಷ್ಟಿಯಾಗಿದೆ. ಇದನ್ನು ಎದುರಿಸಲು ತಾವೆಲ್ಲರೂ ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲಬೇಕು ಎಂಬುದಾಗಿಯೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಲ್ಲಿ ಪ್ರಧಾನಿಯವರು ಕೇಳಿದ್ದಾರೆ. ಇನ್ನು ಕೋವಿಡ್​ ಸೋಂಕನ್ನು ನಿಯಂತ್ರಿಸುವ ಹಾಗೂ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಕರೊನಾ ಟೆಸ್ಟ್​ ಬಗ್ಗೆ ಹೆಚ್ಚಿನ ಒತ್ತು ಕೊಡಬೇಕು. ಅದರಲ್ಲೂ ಶೇ. 70 ಆರ್​ಟಿ-ಪಿಸಿಆರ್ ಟೆಸ್ಟ್​ ನಡೆಸಬೇಕು. ಇದರಿಂದ ಸೋಂಕಿನ ಪ್ರಕರಣಗಳು ಹೆಚ್ಚಿಗೆ ಕಂಡುಬರಬಹುದು. ಅದಾಗ್ಯೂ ಟೆಸ್ಟಿಂಗ್ ಪ್ರಮಾಣ ಹೆಚ್ಚೇ ನಡೆಯಲಿ. ಅಲ್ಲದೆ ಮಾದರಿ ಸಂಗ್ರಹ ಕೂಡ ಸಮರ್ಪಕ ರೀತಿಯಲ್ಲಿ ಆಗಬೇಕು, ಅದು ಸೂಕ್ತ ಉಸ್ತುವಾರಿಯಲ್ಲೇ ಪರೀಕ್ಷಿಸಲ್ಪಡಬೇಕು ಎಂಬುದಾಗಿ ಮೋದಿ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ವ್ಯಾಪಾರಸ್ಥರಿಗೆ ಮತ್ತೆ ಆಘಾತ: ಕೋವಿಡ್​ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮತ್ತೆ ಕರ್ಫ್ಯೂ ವಿಧಿಸುವ ಕುರಿತು ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಒಲವು ತೋರಿರುವ ಅವರು, ಅಂಥ ಕಡೆ ಅದನ್ನು ನೈಟ್​ ಕರ್ಫ್ಯೂ ಎಂದು ಕರೆಯುವ ಬದಲು ಕರೊನಾ ಕರ್ಫ್ಯೂ ಎಂದು ಕರೆಯುವುದೇ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಅಗತ್ಯ ಇರುವ ಕಡೆಯಲ್ಲೆಲ್ಲ ರಾತ್ರಿ 9 ಅಥವಾ 10ರಿಂದ ಬೆಳಗ್ಗೆ 5 ಅಥವಾ 6 ಗಂಟೆಯವರೆಗೆ ಕರ್ಫ್ಯೂ ವಿಧಿಸಲು ಆರಂಭಿಸಬಹುದು ಎಂಬ ಚಿಂತನೆಯನ್ನೂ ಅವರು ಮುಂದಿಟ್ಟಿದ್ದಾರೆ. ಒಂದು ವೇಳೆ ಇದು ಗಂಭೀರವಾಗಿ ಅನುಷ್ಠಾನಗೊಂಡಲ್ಲಿ ವ್ಯಾಪಾರಸ್ಥರು ಮತ್ತೆ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಗಳಿವೆ.‘

    ಇದನ್ನೂ ಓದಿ: ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

    ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ, ಸಕ್ರಿಯ ಪ್ರಕರಣಗಳು 50 ಸಾವಿರಕ್ಕೂ ಅಧಿಕ, ಮರಣ ಪ್ರಮಾಣದಲ್ಲೂ ಹೆಚ್ಚಳ!

    ಕರೊನಾ ಎರಡನೇ ಅಲೆ ಯಾವಾಗ ಮುಗಿಯುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts