ಮಂಡ್ಯ: ವಿವಿಧ ಆಮಿಷ ತೋರಿಸಿ ಜನರನ್ನು ಮತಾಂತರ ಮಾಡುತ್ತಿರುವ ಏಜೆಂಟ್ಗಳು ದೇಶದಲ್ಲಿ ಎಲ್ಲೆಡೆ ಇದ್ದಾರೆ, ರಾಜ್ಯದಲ್ಲೂ ಇದ್ದಾರೆ. ಈ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮತಾಂತರ ಎಂಬುದು ಹೀನ ಕೃತ್ಯ. ಯಾವ ಧರ್ಮದಲ್ಲಿ ಹುಟ್ಟಿರುತ್ತಾರೆ ಆ ಧರ್ಮದಲ್ಲಿ ಪೂಜೆಪುನಸ್ಕಾರ ಮಾಡುವುದು ಅವರ ಹಕ್ಕು. ಆದರೆ ವಿದೇಶದಿಂದ ಹಣ ತಂದು, ಏಜೆಂಟ್ಗಳ ಮೂಲಕ ಹಣ ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ. ಹಸು, ಎಮ್ಮೆ ಕೊಡುಸ್ತೀನಿ, ಆಸ್ಪತ್ರೆ ಖರ್ಚು ನೋಡ್ಕೊಳ್ತೀನಿ ಅಂತ ಲಕ್ಷಾಂತರ ಜನರನ್ನ ಮತಾಂತರ ಮಾಡಲು ಮುಂದಾಗ್ತಿದ್ದಾರೆ ಎಂದರು.
ಇದನ್ನೂ ಓದಿ: ಎಂಬಿಎ ಪದವೀಧರರಿಗೆ ಸ್ಟೇಟ್ ಬ್ಯಾಂಕ್ನಲ್ಲಿದೆ ಉದ್ಯೋಗ: 38 ಹುದ್ದೆಗಳಿಗೆ ಆಹ್ವಾನ
ಮತಾಂತರ ಮಾಡುತ್ತಿರುವವರು ಏಜೆಂಟ್ಗಳಿದ್ದ ಹಾಗೆ. ಒಂದು ಮತಾಂತರಕ್ಕೆ ಇಂತಿಷ್ಟು ಅಂತ ಅವರಿಗೆ ಹಣ ಕೊಡ್ತಾರೆ. ಆ ಹಣದ ಆಸೆಗೆ ಮತಾಂತರ ಮಾಡ್ತಿರುವುದು ನಮಗೆ ಗೊತ್ತಾಗಿದೆ. ರಾಜ್ಯದಲ್ಲಿ ನಡೀತಿದೆ, ಮಂಡ್ಯದಲ್ಲೂ ನಡೀತಿದೆ. ಈ ಕೆಲಸ ಮಾಡುತ್ತಿರುವ ಸಮಾಜಘಾತುಕ, ದೇಶದ್ರೋಹಿ ಹಾಗೂ ಧರ್ಮದ್ರೋಹಿ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ತೀವಿ ಎಂದ ಅಶೋಕ್ ಖಡಕ್ ಆಗಿ ಹೇಳಿದರು.
ಜೊತೆಗೆ, “ಮತಾಂತರಕ್ಕೆ ಬ್ರೇಕ್ ಹಾಕುವ ಕೆಲಸ ಬಿಜೆಪಿ ಸರ್ಕಾರವೇ ಮಾಡಬೇಕು. ಈ ಕೆಲಸವನ್ನ ಕಾಂಗ್ರೆಸ್ ಸರ್ಕಾರ ಬಂದ್ರೆ ಮಾಡಲ್ಲ, ಆದ್ದರಿಂದ ನಮ್ಮ ಸರ್ಕಾರವೇ ಮಾಡುತ್ತೆ” ಎಂದು ಸಚಿವ ಅಶೋಕ್ ಹೇಳಿದರು.
ಕಾಂಗ್ರೆಸ್ನ ಐಎಸ್ಐ ಏಜೆಂಟ್ ಅಂದ್ರೆ ಏನ್ ಮಾಡ್ತಾರೆ? – ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನೆ
ಮೀಸಲಾತಿ ಹೋರಾಟ ಕೈಬಿಡಲು ಸಿಎಂ ಮನವಿ; ಇಂದು ಚರ್ಚೆ ನಂತರ ನಿರ್ಣಯ ಎಂದ ಸ್ವಾಮೀಜಿ