More

    ಸಂವಿಧಾನ ಇನ್ನಷ್ಟು ಬಲಗೊಳ್ಳುವುದು ಅಗತ್ಯ

    ಆನಂದಪುರ: ದೇಶದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ತಾಲೂಕು ಡಿಎಸ್‌ಎಸ್ ಡಿಜಿ ಸಾಗರ್ ಬಣದ ತಾಲೂಕು ಸಂಚಾಲಕ ನಟರಾಜ ಗೇರುಬೀಸು ತಿಳಿಸಿದರು. ಸಮೀಪದ ಇರುವಕ್ಕಿಯ ಬಸವನ ಹೊಂಡದಲ್ಲಿ ನಡೆದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ. ಡಿ.ಜಿ.ಸಾಗರ್ ಬಣದ ಹೋಬಳಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಸಂವಿಧಾನ ಎಲ್ಲ ಜಾತಿ, ಮತಗಳ ಜನರ ಹಿತ ಕಾಯುವಂತಿದೆ. ಜನರ ವೈಯಕ್ತಿಕ ಬದುಕು ಸುಧಾರಿಸಲು ಸಂವಿಧಾನ ಇನ್ನಷ್ಟು ಬಲಗೊಳ್ಳಬೇಕು ಎಂದರು. ನಮ್ಮ ಸಂಘಟನೆ ಬಲಿಷ್ಠವಾಗಿದ್ದರೆ ಸಮಾಜದಲ್ಲಿ ನಡೆಯುವ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯ. ನ್ಯಾಯಪರ ಹೋರಾಟವು ನಮ್ಮ ಸಮಿತಿ ಉದ್ದೇಶ. ಅಂಬೇಡ್ಕರ್ ಆದರ್ಶಗಳಂತೆ ಸಮಾಜದಲ್ಲಿ ಸಮಾನತೆ, ಶಾಂತಿಯುತ ಸಹಬಾಳ್ವೆ ಸಾಧಿಸೋಣ ಎಂದರು. ಸಲಹಾ ಸಮಿತಿ ಸದಸ್ಯ ಗಂಗಾಧರ ಯಡೆಹಳ್ಳಿ, ಜಿಪಂ ಮಾಜಿ ಸದಸ್ಯ ಗೋಪಾಲ್, ಜಿಲ್ಲಾ ಪ್ರಮುಖ ಗಣಪತಿ ಇರುವಕ್ಕಿ, ಸಂಘಟನಾ ಸಂಚಾಲಕ ಕೃಷ್ಣಮೂರ್ತಿ, ಆನಂದಪುರದ ಹೋಬಳಿ ಅಧ್ಯಕ್ಷ ವ್ಯೋಮಕೇಶ, ಸಂಘಟನಾ ಸಂಚಾಲಕರಾದ ಭರತ್, ದೊರೆ, ಖಜಾಂಚಿ ಬಂಗಾರಪ್ಪ ಹಾಗೂ ಪ್ರಮುಖರಾದ ಆನಂದ್, ಬಸವನಹೊಂಡ, ಸಾಗರ ತಾಲೂಕು ಪ್ರಮುಖರಾದ ಚಂದ್ರಪ್ಪ ಡಿ.ಕೆ., ಸಂಘಟನಾ ಸಂಚಾಲಕರಾದ ಚಂದ್ರಶೇಖರ್ ಇರುವಕ್ಕಿ, ನಾಗಭೂಷಣ್, ಚಂದ್ರಪ್ಪ ಗೇರುಬೀಸು, ಹಿರಿಯಪ್ಪ, ನೂರಹಮ್ಮದ್, ಸುರೇಶ್, ಮಂಜು ಹೆಬ್ಬೋಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts