ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ಪೊಲೀಸ್ ಪೇದೆ ಮತ್ತು ಆತನ ಹೆಂಡತಿಯನ್ನು ಕೊಲೆ ಮಾಡಲಾಗಿದೆ. ಮನೆಯೊಳಗಿದ್ದ ಅಪ್ಪ ಅಮ್ಮನ ಮೇಲೆ ಯಾರೋ ಹಲ್ಲೆ ನಡೆಸುತ್ತಿದ್ದರೂ ಮಗಳು ಮಾತ್ರ ಮನೆ ಹೊರಗೆ ನೆಮ್ಮದಿಯಿಂದ ಅಡ್ಡಾಡಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಪಾಠ ಹೇಳಿಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಶಿಕ್ಷಕ!
ಜ್ಯೋತಿ ಪ್ರಸಾದ್ ಶರ್ಮಾ (45) ಮತ್ತು ಆತನ ಹೆಂಡತಿ ನೀಲಂ (43) ಮೃತ ದುರ್ದೈವಿಗಳು. ಜ್ಯೋತಿ ಪ್ರಸಾದ್ ಅವರನ್ನು ವಿಶೇಷ ಸಶಸ್ತ್ರ ಪಡೆ (ಎಸ್ಎಎಫ್)ನೊಂದಿಗೆ ನಿಯೋಜಿಸಲಾಗಿತ್ತು. ಯಾರೀ ದುಷ್ಕರ್ಮಿಗಳು ದಂಪತಿಗೆ ಹರಿತಾದ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ‘ನನ್ನ ಕಿಡ್ನಿ ಮಾರಾಟಕ್ಕಿದೆ!’ ವಿಚಿತ್ರ ಜಾಹೀರಾತಿನ ಹಿಂದಿದೆ ನೋವಿನ ಕಥೆ
ಮನೆಯೊಳಗಿದ್ದ ದಂಪತಿ ನೋವಿನಿಂದ ನರಳಾಡುವಾಗ ಅವರ 17 ವರ್ಷದ ಮಗಳು ಮನೆ ಹೊರಗೆ ಅಡ್ಡಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪ್ರಾಪ್ತ ಮಗಳು ಮತ್ತು ಆಕೆಯ ಬಾಯ್ ಫ್ರೆಂಡ್ನನ್ನು ಶಂಕಿತರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)
ಏಳು ಮಕ್ಕಳಿಗೆ ಜೀವ ಕೊಟ್ಟು ಪ್ರಾಣ ಬಿಟ್ಟ ಮಗು! ಉಕ್ರೇನ್, ರಷ್ಯಾದ ಮಕ್ಕಳಿಗೂ ಉಸಿರು ನೀಡಿದ ಬಾಲಕ
ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!