ನವದೆಹಲಿ: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್ ಬಣಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಮಾರ್ಗರೆಟ್ ಆಳ್ವಾ, ಇದು ಕಾಂಗ್ರೆಸ್ನ ಆಂತರಿಕ ವಿಚಾರ. ಇದನ್ನು ಸೋನಿಯಾ ಗಾಂಧಿಯವರೇ ಬಗೆಹರಿಸಬೇಕು ಎಂದು ಹೇಳಿದ್ದಾರೆ.
ತಾನು ಯಾವ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಸಚಿನ್ ಪೈಲಟ್ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಕಾಂಗ್ರಸ್ ಸರ್ಕಾರವನ್ನು ಉರುಳಿಸುವ ಇರಾದೆಯೂ ನನಗಿಲ್ಲ ಹಾಗೂ ನಾನು ಬಿಜೆಪಿ ಸೇರುವುದಿಲ್ಲ ಎಂದವರು ತಿಳಿಸಿದ್ದಾರೆ. ಹಾಗಾಗಿ ಇದು ಕಾಂಗ್ರೆಸ್ನ ಆಂತರಿಕ ವಿಚಾರ ಎಂದೇ ಪರಿಗಣಿಸಲ್ಪಡುತ್ತದೆ. ಇಲ್ಲಿ ರಾಜ್ಯಪಾಲರಾಗಲೀ, ಕೋರ್ಟ್ ಆಗಲಿ ಮಧ್ಯಪ್ರವೇಶ ಮಾಡುವ ಅಗತ್ಯವೂ ಕಾಣುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಐಸಿಸ್ ಉಗ್ರರು ನಮ್ಮ ನಡುವೆಯೇ ಹೆಚ್ಚಾಗಿದ್ದಾರೆ…! ವಿಶ್ವ ಸಂಸ್ಥೆ ನೀಡಿದೆ ಆಘಾತಕಾರಿ ಮಾಹಿತಿ
ಹಾಗೇ ಈ ಜಗಳವನ್ನು ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಬಗೆಹರಿಸಬೇಕು. ಅವರು ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಅವರಿಬ್ಬರನ್ನೂ ಒಟ್ಟಿಗೇ ಚಹಾ ಕುಡಿಯಲು ಬನ್ನಿ ಎಂದು ಆಹ್ವಾನಿಸಬೇಕು. ಇಬ್ಬರನ್ನೂ ಮುಖಾಮುಖಿ ಕೂರಿಸಿಕೊಂಡು, ಟೀ ಕುಡಿಯುತ್ತ ಚರ್ಚಿಸಬೇಕು. ಒಂದು ಕಪ್ ಚಹಾ ಮುಗಿಯುವುದರೊಳಗೆ ಎಲ್ಲ ಭಿನ್ನಾಭಿಪ್ರಾಯಗಳೂ ಮುಗಿದಿರುತ್ತವೆ ಎಂದು ಮಾರ್ಗರೆಟ್ ಆಳ್ವಾ ಹೇಳಿದ್ದಾರೆ. (ಏಜೆನ್ಸೀಸ್)
‘ಒಂದು ಗ್ಯಾಂಗ್ ನನ್ನ ವಿರುದ್ಧ ಕೆಲಸ ಮಾಡುತ್ತಿದೆ..ಇರಲಿ, ದೇವರಿದ್ದಾನೆ’: ಎ.ಆರ್.ರೆಹಮಾನ್