ನವದೆಹಲಿ: ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಅಯೋಧ್ಯೆಯಲ್ಲಿ ಅಪೂರ್ಣ ರಾಮಮಂದಿರವನ್ನು ಲೋಕಾರ್ಪಣೆ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ.
ಇದನ್ನೂ ಓದಿ: ‘ನಾನೂ ರಾಮ ಭಕ್ತ – ರಾಮಕೋಟಿ ಬರೆಯುತ್ತಿದ್ದೇನೆ’: ಸಚಿವ ಮುನಿಯಪ್ಪ
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ಸುಪ್ರಿಯಾ ಶ್ರೀನಾಟೆ ಮತ್ತು ಪವನ್ ಖೇರಾ, ಜ್ಯೋತಿರ್ ಮಠದ ಮುಖ್ಯಸ್ಥ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸಮಾರಂಭಕ್ಕೆ ಹಾಜರಾಗಲು ನಿರಾಕರಿಸಿದ್ದನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ, ಭಗವಾನ್ ರಾಮನ ಮೂರ್ತಿಯ ಪ್ರತಿಷ್ಠಾಪನೆ ಧಾರ್ಮಿಕ ವಿಧಾನಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ನಾಲ್ವರು ಶಂಕರಾಚಾರ್ಯರು (ಧಾರ್ಮಿಕ ಮುಖಂಡರು) ಅಪೂರ್ಣ ದೇವಾಲಯದಲ್ಲಿ ಪಟ್ಟಾಭಿಷೇಕವನ್ನು ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. “ನನ್ನ ಮತ್ತು ನನ್ನ ದೇವರ ನಡುವೆ ರಾಜಕೀಯ ಪಕ್ಷದ ಕಾರ್ಯಕರ್ತರು ಮಧ್ಯವರ್ತಿಗಳಾಗುವುದನ್ನು ನಾನು ಏಕೆ ಸಹಿಸಿಕೊಳ್ಳುತ್ತೇನೆ?” ಎಂದು ಅವರು ಪ್ರಶ್ನಿಸಿದ್ದಾರೆ.
ರಾಮ ಮಂದಿರಕ್ಕೆ ಉದ್ಘಾಟನೆ ಬಳಿಕ ಕಾಂಗ್ರೆಸ್ ಪಕ್ಷದ ನಾಯಕರು ಭೇಟಿ ನೀಡಲಿದ್ದಾರೆ ಎಂದು ಪವನ್ ಖೇರಾ ಹೇಳಿದ್ದಾರೆ.
ಆಹ್ವಾನ ಬಂದ ಕೂಡಲೇ ದೇವಸ್ಥಾನಕ್ಕೆ ಹೋಗಬೇಕೆಂದೇನೂ ಇಲ್ಲ. ಎಂದು, ಯಾವ ವರ್ಗದ ಜನರು ಹೋಗಬೇಕೆಂದು ಯಾರು ನಿರ್ಧರಿಸುತ್ತಾರೆ? ರಾಜಕೀಯ ಪಕ್ಷವು ನಿರ್ಧರಿಸುತ್ತದೆಯೇ? ಯಾವುದೇ ಧರ್ಮ ಮತ್ತು ನಂಬಿಕೆ ಯಾರ ಮೇಲೂ ಹೇರಲಾಗದು. ಇದರಲ್ಲಿ ಕೇವಲ ರಾಜಕೀಯವಿದೆ ಎಂದು ಖೇರಾ ಹೇಳಿದರು.
ಧಾರ್ಮಿಕ ಮುಖಂಡರು ರಾಮ ನವಮಿಯಂದು ಸಮಾರಂಭವನ್ನು ನಡೆಸಲು ಬಯಸಿದ್ದರು. ಆದರೆ ಅವರ ತೀರ್ಮಾನಕ್ಕೆ ಮನ್ನಣೆ ಕೊಡದೆ ದಿನಾಂಕವನ್ನು ಹೇಗೆ ನಿರ್ಧರಿಸಲಾಯಿತು ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಚುನಾವಣೆ ಗಮನದಲ್ಲಿಟ್ಟುಕೊಂಡು ದಿನಾಂಕವನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ಒಬ್ಬ ವ್ಯಕ್ತಿಯಇಚ್ಚೆಯಂತೆ ಧರ್ಮ ಮತ್ತು ದೇವರನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ನಾವು ಅನುಮತಿಸುವುದಿಲ್ಲ ಎಂದು ಅವರು ಹೇಳಿದರು.
ರಾಮಮಂದಿರ ಯಜ್ಞಕ್ಕೆ ಪ್ರಧಾನಿ ಸಿದ್ಧತೆ: ಧರ್ಮಶಾಸ್ತ್ರ, ಸಂತರ ಮಾರ್ಗದರ್ಶನದಂತೆ ಯಾಮ-ನಿಯಮ ಪಾಲಿಸುವೆ ಎಂದ ಮೋದಿ..