ಜೈಪುರ: ಪಡಿತರ ವಿತರಣೆ ಸಂದರ್ಭದಲ್ಲಿ ರಾಜಸ್ಥಾನದ ಬೇಗುಣ ವಿಧಾನಸಭಾ ಕ್ಷೇತ್ರದ ಶಾಸಕ ಕಾಂಗ್ರೆಸ್ ನಾಯಕ ರಾಜೇಂದ್ರ ಸಿಂಗ್ ಬಿಧೂರಿ ಅವರು ಅಲ್ಲಿದ್ದ ಮಹಿಳೆಯರಿಗೆ ಎರಡು ಆಯ್ಕೆ ನೀಡಿದರು.ಯಾರು ಉತ್ತಮರು ಮೋದಿಯೋ ಅಥವಾ ಗೆಹ್ಲೋಟೋ ಎಂಬ ಪ್ರಶ್ನೆ ಅದಾಗಿತ್ತು. ಅದಕ್ಕೆ ಅವರು ನೀಡುವ ಉತ್ತರ ನೋಡಿ ರೇಷನ್ ವಿತರಿಸಿದ ಬಿಧೂರಿ ಅವರ ಕ್ರಮ ಈಗ ದೇಶವ್ಯಾಪಿ ಟೀಕೆಗೆ ಒಳಗಾಗಿದೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೀಡಾಗಿದೆ. ಈ ಘಟನೆ ಏಪ್ರಿಲ್ 17ರಂದು ಬೇಗುಣ ತಾಲೂಕಿನ ಸೋನಿಯಾನ ಗ್ರಾಮದಲ್ಲಿ ರೇಷ್ ಕಿಟ್ ವಿತರಣೆ ಸಂದರ್ಭದಲ್ಲಿ ನಡೆದಿದೆ. ವಿಡಿಯೋದಲ್ಲಿ ಕಂಡು ಬಂದ ದೃಶ್ಯಾವಳಿ ಪ್ರಕಾರ, ಶಾಸಕ ಬಿಧೂರಿ ಅವರು ಮೈಕ್ರೋಫೋನ್ ಹಿಡಿದುಕೊಂಡು ರೇಷನ್ ಕಿಟ್ ಪಡೆಯಲು ಬಂದ ಮಹಿಳೆ ಒಬ್ಬರಲ್ಲಿ ಆ ದೀಪ ಬೆಳಗಲು ಹೇಳಿದ ಮೋದಿಯೋ ಅಥವಾ ರೇಷನ್ ವಿತರಣೆಗೆ ಕ್ರಮ ಕೈಗೊಂಡ ಗೆಹ್ಲೋಟ್ ಉತ್ತಮರೋ? ಎಂದು ಕೇಳಿದರು. ಅದಕ್ಕೆ ಅವರು ಮೋದಿ ಎಂದು ಹೇಳಿದ್ರು. ಕೂಡಲೇ ಪ್ರತಿಕ್ರಿಯಿಸಿದ ಶಾಸಕ ಬಿಧೂರಿ, ಹಾಗಾದರೆ ನೀವು ಮೋದಿ ಹೇಳಿದ ಹಾಗೆ ದೀಪ ಬೆಳಗಿ. ಈ ರೇಷನ್ ಇಲ್ಲೇ ಬಿಟ್ಟು ಹೋಗಿ ಎಂದು ಹಿಂದಕ್ಕೆ ಕಳುಹಿಸಿದರು.
ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.ಶಾಸಕರ ನಡೆ ಟೀಕೆಗೂ ಒಳಗಾಗಿದೆ. ಆದರೆ, ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ನಡುವೆ, ಶಾಸಕ ಬಿಧೂರಿ ಅವರ ವಿವಾದಾತ್ಮಕ ನಡೆ ಇದೇ ಮೊದಲನೆಯದಲ್ಲ. ವಾರದ ಹಿಂದಷ್ಟೇ ಲಾಕ್ಡೌನ್ ನಿಯಮ ಯಲ್ಲಂಘಿಸಿ ದಂಡ ಹಾಕಿಸಿಕೊಂಡ ಮರುದಿನವೇ ದಂಡ ಹಾಕಿದ ಅಧಿಕಾರಿಯನ್ನು ವರ್ಗಾವಣೆ ಮಾಡಿಸಿ ತೀವ್ರ ಟೀಕೆಗೂ ಗುರಿಯಾಗಿದ್ದಾರೆ. (ಏಜೆನ್ಸೀಸ್)
ಮುಂಬೈ, ಕೋಲ್ಕತ, ಜೈಪುರ, ಇಂದೋರ್ಗಳಲ್ಲಿ COVID19 ಸೋಂಕು ಗಂಭೀರ ಎಂದ ಕೇಂದ್ರ ಆರೋಗ್ಯ ಸಚಿವಾಲಯ
ಪಾದರಾಯನಪುರ ಗಲಭೆ ರಾಜಕೀಯ ಪಿತೂರಿ ಎಂದು ಟ್ವೀಟ್ ಮಾಡಿದ್ರು ಶಾಸಕ ಜಮೀರ್ ಅಹಮದ್ ಖಾನ್!
Meet Rajendra Singh Bidhuri – #Rajasthan Cong MLA who denied rations to Modi fan
— Sangeeta Pranvendra (@sangpran) April 19, 2020
This week itself he got the SDM transferred
The IAS had challaned his car for violating lockdown norms@fpjindia@BJP4India@INCIndia@DrSatishPoonia@IASassociation#COVIDhttps://t.co/fUYOIMVQsk
This is @INCIndia MLA #RajendraBidhuri's 2nd controversy in a week. On April 14 – SDM Tejaswi Rana challaned his car for violating lockdown. He got the IAS officer transferred next day. 2/3@fpjindia#LockdownVVIPs pic.twitter.com/KhRb9Eo3PF
— Sangeeta Pranvendra (@sangpran) April 19, 2020