More

    ದೀಪಿಕಾ ‘ಮುಕ್ತ ಸಂಬಂಧ’ ಹೇಳಿಕೆ ಟೀಕಿಸಿದ ನೆಟ್ಟಿಗರು: ಸುಪ್ರಿಯಾ ಶ್ರಿನಾತೆ ಅಸಮಾದಾನ

    ನವದೆಹಲಿ: ಮುಕ್ತ ಸಂಬಂಧದ ಕುರಿತು ನಟಿ ದೀಪಿಕಾ ಪಡುಕೋಣೆ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಿದ್ದಕ್ಕಾಗಿ ಕಾಂಗ್ರೆಸ್‌ನ ಸುಪ್ರಿಯಾ ಶ್ರಿನಾತೆ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಟ್ಯೂಷನ್​ಗೆ ಬಂದ ವಿದ್ಯಾರ್ಥಿ ಹತ್ಯೆ ಮಾಡಿ ಅಪಹರಣ ನಾಟಕವಾಡಿದ್ದ ಶಿಕ್ಷಕಿ-ಆಕೆಯ ಪ್ರಿಯಕರ!

    ರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಸೀಸನ್ 8 ರ ಚೊಚ್ಚಲ ಸಂಚಿಕೆಯಲ್ಲಿ ದೀಪಿಕಾ ಪಡುಕೋಣೆ ಮತ್ತು ಅವರ ಪತಿ ರಣವೀರ್ ಸಿಂಗ್ ಕಾಣಿಸಿಕೊಂಡು, ತಮ್ಮ ದಾಂಪತ್ಯ ಮತ್ತು ದೀಪಿಕಾ ತನ್ನ ಜೀವನದಲ್ಲಿ ಖಿನ್ನತೆಯೊಂದಿಗೆ ಹೋರಾಡಿದ್ದರ ಬಗ್ಗೆ ಮಾತನಾಡಿದ್ದರು.

    ದೀಪಿಕಾ ಅವರು ರಣವೀರ್‌ಗೆ ಬದ್ಧವಾಗಿಲ್ಲ. ಅವರು ಡೇಟಿಂಗ್ ಪ್ರಾರಂಭಿಸಿದಾಗ ಇತರ ಕೆಲವು ಪುರುಷರು ಭೇಟಿಯಾಗುತ್ತಿದ್ದರು ಎಂದು ಹೇಳಿದ್ದರು. ಅವರ ಮದುವೆ, ಪ್ರೀತಿ, ಪ್ರೇಮ, ಒಂಟಿತನದ ಬಗ್ಗೆ ಮಾತನಾಡಿದ್ದು, ಅದನ್ನು ಎಲ್ಲರೂ ಆರೋಗ್ಯಕರವಾಗಿ ತೆಗೆದುಕೊಳ್ಳಬೇಕಿತ್ತು.

    ಸಾಧಕಿಯಾಗಿರುವ ದೀಪಿಕಾ ಮಾನಸಿಕ ಆರೋಗ್ಯದೊಂದಿಗಿನ ತನ್ನ ಹೋರಾಟಗಳ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರು ಇತರರಿಗೆ ಸ್ಫೂರ್ತಿಯಾಗಬೇಕು. ಅದೇ ರೀತಿ ಒಬ್ಬ ಸಾಧಾರಣ, ಸಾಧಕನಲ್ಲದ ಯುವಕ ಆಕೆ ಜತೆ ಹೇಗೆ ನಿಂತನು ಎಂಬುದರ ಕುರಿತು ಮಾತನಾಡುತ್ತಾನೆ.
    ಸಮಾಜವಾಗಿ ನಾವು ಸಮಸ್ಯೆಗಳನ್ನು ಅವರು ಎದುರಿಸದ ಬಗೆ, ಅವರು ಮುಕ್ತ ಮನಸ್ಸಿನಿಂದ ಮಾತನಾಡಿದ ಧೈರ್ಯವನ್ನು ಶ್ಲಾಘಿಸುವ ಬದಲು ಅವರ ಕುರಿತು ಕೆಟ್ಟದಾಗಿ ಟ್ರೋಲಿಂಗ್ ಮಾಡುವುದು, ಅವರ ತೇಜೋವಧೆ ಮಾಡುವುದು ಮತ್ತು ಅಸಭ್ಯ ಮೀಮ್‌ಗಳನ್ನು ಮಾಡುವುದು ಎಷ್ಟು ಸರಿ ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.

    ಜನ ವಾಸ್ತವವನ್ನು ಏಕೆ ನಿಭಾಯಿಸಲು ಸಾಧ್ಯವಿಲ್ಲ, ಮಾನವ ಭಾವನೆಗಳು ಏಕೆ ಅವರಿಗೆ ಅರ್ಥವಾಗುತ್ತಿಲ್ಲ? ಎಲ್ಲ ಮಾತುಗಳೂ ಮಿಠಾಯಿಗಳಾಗಿರಬೇಕು ಎಂದರೆ ಹೇಗೆ? ಸತ್ಯ ಹೇಳಿದಾಗ ನಿಂದನೆ, ಅತೃಪ್ತಿ ಹೊರಹಾಕುವುದು ಸರಿಯಲ್ಲ. ಪ್ರೀತಿಯು ಉತ್ತಮ ಮನುಷ್ಯನನ್ನಾಗಿ ಮಾಡುತ್ತದೆ. ಆಕೆ ಹೇಳಿದಂತೆ ನಿಂದನೆಗಳನ್ನೆಲ್ಲ ಮೆಟ್ಟಿ ನಿಲ್ಲಬಲ್ಲಳು ಎಂದು ಸುಪ್ರಿಯಾ ಶ್ರೀನಾತೆ “X”ನಲ್ಲಿ ಪೋಸ್ಟ್​ ಹಾಕಿದ್ದಾರೆ.

    ಅಣ್ಣ ಸೂರ್ಯನ ಹಾದಿಯಲ್ಲಿ ನಟ ಕಾರ್ತಿ; ಸಮಾಜ ಕಲ್ಯಾಣ ಕಾರ್ಯಗಳಿಗೆ 1 ಕೋಟಿ ರೂ. ದೇಣಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts