More

    ಕಾಂಗ್ರೆಸ್‌ನಿಂದ ಎಲ್ಲ ವರ್ಗದವರ ಏಳಿಗೆ ಸಾಧ್ಯ

    ಸಿಂಧನೂರು: ಕಾಂಗ್ರೆಸನ್ನು ಅಧಿಕಾರಕ್ಕೆ ತಂದಲ್ಲಿ ಜನಪರ ಯೋಜನೆಗಳ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ ಹೇಳಿದರು.
    ನಗರದಲ್ಲಿ ಮತದಾರರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೀಡಿ ಮಂಗಳವಾರ ಮಾತನಾಡಿದರು. ಕಾಂಗ್ರೆಸ್‌ನಿಂದ ಮಾತ್ರ ಎಲ್ಲ ವರ್ಗದವರ ಏಳಿಗೆ ಸಾಧ್ಯ. ಬಡವರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್‌ಗೆ ಇದೆ ಎಂದರು. ನಗರಸಭೆ ಉಪಾಧ್ಯಕ್ಷ ಮುರ್ತುಜಾ ಹುಸೇನ್, ನಗರಸಭೆ ಸದಸ್ಯರಾದ ಉಮಾ ಸುರೇಶ್ ಜಾಧವ್, ತಿಮ್ಮಣ್ಣ ಭಂಗಿ, ಪ್ರಭುರಾಜ ಕರ್ಪೂರಮಠ, ವೆಂಕಟೇಶ ಬಂಡಿ ವಕೀಲ, ಶರಣಪ್ಪ ಉಪ್ಪಲದೊಡ್ಡಿ, ವೀರೇಶ ಹಟ್ಟಿ, ಪ್ರಮುಖರಾದ ಲಿಂಗಾಧರ, ಮದರ್ ಹುಸೇನ್, ಶಿವು ತಡಕಲ್, ಅಸ್ಲಾಂಪಾಷಾ, ಖಾಸಿಂಪಾಷಾ, ವಾಗೇಶ ಇದ್ದರು.

    ಫೋಟೊ14ಎಸ್‌ಎನ್‌ಡಿ-06
    ಸಿಂಧನೂರಿನಲ್ಲಿ ಮತದಾರರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಮಂಗಳವಾರ ನೀಡಲಾಯಿತು. ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲೀಕ್ ವಕೀಲ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ.ನಾಗವೇಣಿ ಪಾಟೀಲ್, ಗ್ರಾಮೀಣ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಣಿ ಗೋಮರ್ಸಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts