More

    ಏಕಾಗ್ರತೆಯಿಂದ ನೆಮ್ಮದಿ ಸಾಧ್ಯ

    ಕಾಗವಾಡ: ಒತ್ತಡದ ಜೀವನದಲ್ಲಿ ಏಕಾಗ್ರತೆಯಿಂದ ಪರಮಾತ್ಮನ ಪೂಜಿಸಿದಾಗ ಜೀವನದಲ್ಲಿ ಶಾಂತಿ, ನೆಮ್ಮದಿ ಸಾಧಿಸಲು ಸಾಧ್ಯ ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಬೆನ್ನಾಳೆ ಮಹಾರಾಜರು ಹೇಳಿದರು. ಪಟ್ಟಣದ ಸಿದ್ಧೇಶ್ವರ ಕಾಲನಿಯ ಆರ್‌ಟಿ ಕಚೇರಿ ಬಳಿ ಈಚೆಗೆ ಜರುಗಿದ ವಿಠ್ಠಲರಾವ ಪತ್ತಾರ ಮಹಾರಾಜರ 6ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಠಯೋಗ, ಜ್ಞಾನಯೋಗ, ಭಕ್ತಿಯೋಗ, ಪರಮಯೋಗದಿಂದ ಸಾಧಿಸಲಾಗದ್ದನ್ನು ಇಂಚಗೇರಿ ಪಂಥದಲ್ಲಿ ಹೇಳಿದಂತೆ ಸುಲಭವಾದ ರೀತಿಯಲ್ಲಿ ಅಭ್ಯಾಸ ಯೋಗ ಅಳವಡಿಸಿಕೊಂಡು ಆತ್ಮನಲ್ಲಿ ಪರಮಾತ್ಮನನ್ನು ಕಾಣಲು ಸಾಧ್ಯ ಎಂದರು. ನಂದಗಾಂವ ಭೂಕೈಲಾಸ ಮಂದಿರದ ಮಹಾದೇವ ಮಹಾ ರಾಜರು, ಹಣಮಾಪುರದ ಹನುಮಂತ ಸಾಧು ಮಹಾರಾಜರು ಮಾತನಾಡಿದರು. ವಿಠ್ಠಲರಾವ ಪತ್ತಾರ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದಾಸಬೋಧ ಗ್ರಂಥಪೂಜೆ, ವೀಣಾಪೂಜೆ ಮತ್ತು ಮಹಾತ್ಮರಿಂದ ಪ್ರವಚನ, ಸಂಪ್ರದಾಯದ ನಿಯಮದಂತೆ ಶೇಜಾರತಿ ಭಜನೆ ಹಾಗೂ ಪುಷ್ಪವೃಷ್ಟಿ ಕಾರ್ಯಕ್ರಮ ಜರುಗಿದವು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

    ಕುಸುಮಾವತಿ ವಿ. ಪತ್ತಾರ, ಡಾ.ಮಲ್ಲಿಕಾರ್ಜುನ ಪತ್ತಾರ, ಅಂಭುಜಾ ಪತ್ತಾರ, ನಿವೃತ್ತ ಜಿಲ್ಲಾಧಿಕಾರಿ ಗಿರಿಮಲ್ಲಣ್ಣ ಜಿಟ್ಟಿಮನಿ, ನಿವೃತ್ತ ಸಿಟಿಒ ಬಾಹುರಾಜ ಜಿಟ್ಟಿಮನಿ, ಮಾಜಿ ಜಿಪಂ ಸದಸ್ಯ ಶ್ರೀಶೈಲ ನಾರಗೊಂಡ, ರಮೇಶ ಚೌಗಲಾ, ಅಪ್ಪಾಸಾಬ ಪಾಟೀಲ, ಕಾಕಾ ಪಾಟೀಲ, ಬಿ.ಎ.ಪಾಟೀಲ, ಸಚಿನ ಕವಟಗೆ, ರೋಹಿದಾಸ ಮುಜಾವರ, ಕಾಕಾಸಾಬ ಚೌಗಲೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts