More

    ಸತ್ಯ ಹೇಳಿದ್ದಕ್ಕೆ ದೂರು ದಾಖಲಾಗಿದೆ, ವಿಚಾರಣೆಗೆ ಕರೆದರೆ ಸೂಕ್ತ ದಾಖಲೆ ನೀಡುತ್ತೇನೆ; ನಿವೇದಿತಾ

    ‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ಖ್ಯಾತಿಯ ನಟಿ ನಿವೇದಿತಾ, ‘ಗಾಂಜಾ ಸೊಪ್ಪು ತುಳಸಿಯೆಷ್ಟೇ ಪವಿತ್ರ. ಶಿವನನ್ನು ಪೂಜಿಸುವ ದೇಶದಲ್ಲಿ ಅವನ ಮೆಚ್ಚಿನ ಗಾಂಜಾ ಏಕೆ ನಿಷೇಧ? ಎಂದು ಹೇಳಿಕೆ ಕೊಟ್ಟಿದ್ದರು. ಇದೀಗ ಆ ಹೇಳಿಕೆಗೆ ಸಂಬಂಧಿಸಿದಂತೆ ಶುಕ್ರವಾರ ನಟಿಯ ವಿರುದ್ಧ ದೂರು ದಾಖಲಾಗಿದೆ.

    ಇದನ್ನೂ ಓದಿ: ಹೀಗೆ ಆದರೆ ಸುಶಾಂತ್ ರೀತಿ ನಾನು ಸೂಸೈಡ್ ಮಾಡ್ಕೋಬೇಕಾಗುತ್ತೆ…!

    ತುಳಸಿಯನ್ನು ಗಾಂಜಾ ಗಿಡಕ್ಕೆ ಹೋಲಿಸಿದ್ದು, ಜನರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂಬ ಆರೋಪದ‌ ಮೇಲೆ ಎಫ್​ಐಆರ್​ ದಾಖಲಾಗಿದ್ದು, ಮಲ್ಲೇಶ್ವರ್  ದೀಪಕ್​ ಎಂಬುವವರು ನಿವೇದಿತಾ ವಿರುದ್ಧ ದೂರು ನೀಡಿದ್ದಾರೆ.

    ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯಿಸಿರುವ ನಿವೇದಿತಾ, ‘ದೀಪಕ್​ ಎಂಬುವವರು ದೂರು ನೀಡಿದ್ದಾರೆ. ವಿಚಾರಣೆಗೆ ಕರೆದರೆ ಹೋಗಿ ಮಾಹಿತಿ ನೀಡಿ ಬರಲಿದ್ದೇನೆ. ಅಥರ್ವ ವೇದದಲ್ಲಿ ತುಳಸಿಯ ಜತೆಗೆ ಗಾಂಜಾದಿಂದಾಗುವ ಅನುಕೂಲತೆಗಳೇನು ಎಂಬುದನ್ನು ನಮೂದಿಸಲಾಗಿದೆ. ಅದೆಲ್ಲದರ ಬಗ್ಗೆ ಮಾಹಿತಿ ನೀಡಿಬರಲಿದ್ದೇನೆ‘ ಎಂದಿದ್ದಾರೆ.

    ಇದನ್ನೂ ಓದಿ: ಶಿವಣ್ಣನಂತೆ ಪ್ರಾಣಿ ದತ್ತು ಪಡೆಯಲು ಮೈಸೂರಿನತ್ತ ಅಭಿಮಾನಿಗಳ ಪ್ರಯಾಣ

    ಇನ್ನು ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದ್ದಂತೆ, ‘ಸನಾತನ ಧರ್ಮದಲ್ಲಿ ಗಾಂಜಾಕ್ಕೆ ತನ್ನದೇ ಆದ ಸ್ಥಾನವಿದೆ. ಕನ್ನಡ ಜನಪದದಲ್ಲೂ ಗಾಂಜಾ ಉಲ್ಲೇಖವಿದೆ. ಕನಕಪುರದಲ್ಲಿ ಶಿವರಾತ್ರಿ ದಿನದಂದು ಗಾಂಜಾವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಹಾಗಾಗಿ ಗಾಂಜಾ ಸೊಪ್ಪಿನ ಮಹತ್ವವನ್ನು ಎಲ್ಲರಿಗೂ ತಿಳಿಸುವ ಜರೂರತ್ತಿದೆ’ ಎಂದು ನಿವೇದಿತಾ ಹೇಳಿಕೆ ನೀಡಿದ್ದರು.

    ಕಳೆದ ಬಾರಿ ಮಾಡಿದ ತಪ್ಪು ಈ ಬಾರಿ ಮಾಡಲ್ಲ … ಕರೀನಾ ಮಾತಿನ ಮರ್ಮವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts