More

    ಸಮುದಾಯ ಭವನದ ಕೀ ಕೇಳಿದ್ದೇ ತಪ್ಪಾ? ಪೊಲೀಸ್​ ಎಂದು ನೋಡದೆ ಶಿಕ್ಷಕ ಹೀಗೆ ಮಾಡ್ಬೋದಾ?

    ವಿಜಯಪುರ: ಸಮುದಾಯ ಭವನದ ಕೀ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಪೊಲೀಸ್ ಪೇದೆಯ ಕಿವಿಯನ್ನೇ ಕಚ್ಚಿರುವ ಘಟನೆ ವಿಜಯಪುರ ತಾಲೂಕಿನ ಮಹಲ-ಐನಾಪುರದಲ್ಲಿ ನಡೆದಿದೆ.

    ಇದನ್ನೂ ಓದಿ: ಸಿಆರ್​ಪಿಎಫ್​ ಯೋಧನ ಕುಟುಂಬದ ಮೇಲೆ ರಮೇಶ್​ ಜಾರಕಿಹೊಳಿ ಬೆಂಬಲಿಗರಿಂದ ಹಲ್ಲೆ ಆರೋಪ

    ಸುರೇಶ್​ ಚವ್ಹಾಣ ಎಂಬಾತನೇ ಪೇದೆಯ ಕಿವಿ ಕಚ್ಚಿದವ. ಖಾಸಗಿ ಶಾಲೆಯ ಶಿಕ್ಷಕನಾಗಿರುವ ಈತ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಪೇದೆ ಬಾಬು ಕಡಣಿ ಅವರ ಕಿವಿಯನ್ನು ಕಚ್ಚಿದ್ದಾರೆ.

    ಮಹಾರಾಷ್ಟ್ರದಿಂದ ಬಂದ ಕಾರ್ಮಿಕರನ್ನು ಕ್ವಾರಂಟೈನ್​ನಲ್ಲಿ ಇಡಲು ಪೇದೆ ಬಾಬು ಅವರು ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಆದೇಶದ ಮೇರೆಗೆ ಸಮುದಾಯ ಭವನದ ಕೀ‌ ಕೇಳಿದ್ದರು. ಆದರೆ, ಸಮುದಾಯ ಭವನ ನನ್ನದು ಎಂದು ಕೀ ಕೊಡದೆ ಸತಾಯಿಸಿದ್ದ ಸುರೇಶ್​ ಏಕಾಏಕಿ ಹಲ್ಲೆಮಾಡಿ ತಹಶೀಲ್ದಾರ್ ಮೋಹನಕುಮಾರಿ ಎದುರಲ್ಲೇ ಕಿವಿ ಕಚ್ಚಿ, ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

    ಇದನ್ನೂ ಓದಿ: ಪತ್ನಿ ಸ್ನಾನ ಮುಗಿಸಿ ಬರುವಷ್ಟರಲ್ಲಿ ನಡೆದಿತ್ತೊಂದು ಭೀಕರ ಘಟನೆ…!

    ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತಹಶೀಲ್ದಾರ್ ಮೋಹನಕುಮಾರಿ ಅವರೇ ಖುದ್ದಾಗಿ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್​)

    ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಕ್ಕೆಆರ್ಥಿಕ​ ಪ್ಯಾಕೇಜ್​​ ಮೂಲಕ 6 ಹೊಸ ಕ್ರಮಗಳು: ನಿರ್ಮಲಾ ಸೀತಾರಾಮನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts