More

    ಹಾಲಹಳ್ಳಿಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ

    ಗುಂಡ್ಲುಪೇಟೆ: ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ಮಾಜಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

    ಗ್ರಾಮದ ಬೊಗ್ಗನಪುರ ಫಾರ್ಮ್‌ನಲ್ಲಿರುವ ಮಹದೇವಪ್ರಸಾದ್ ಸಮಾಧಿಗೆ ಪತ್ನಿ ಮಾಜಿ ಸಚಿವೆ ಡಾ.ಗೀತಾಮಹದೇವಪ್ರಸಾದ್, ಪುತ್ರ ಗಣೇಶ್ ಪ್ರಸಾದ್, ಸಹೋದರ ನಂಜುಂಡಪ್ರಸಾದ್ ಹಾಗೂ ಕುಟುಂಬದವರು ಪುಷ್ಪಾರ್ಚನೆ ಮಾಡಿ ನಮಿಸಿದರು. ಗ್ರಾಮದ ಶ್ರೀಕಂಠಶೆಟ್ಟಿ ಸಮುದಾಯಭವನದಲ್ಲಿ ಅನ್ನದಾನ ಆಯೋಜಿಸಲಾಗಿತ್ತು. ನೂರಾರು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts