ರಾಮನಗರ: ಹೊಲದಲ್ಲಿ ಮೇವು ಕುಯ್ಯುತ್ತಿದ್ದ ಯುವಕನೊಬ್ಬ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿದ್ದಾನೆ. ಚಿಕ್ಕನಹಳ್ಳಿ ಗ್ರಾಮದ ಮುತ್ತುರಾಜ್ (24) ಹಾವು ಕಚ್ಚಿ ಮೃತಪಟ್ಟ ಯುವಕ.
ಚಿಕ್ಕನಹಳ್ಳಿ ಗ್ರಾಮದ ರಾಮಕೃಷ್ಣಯ್ಯ ಎಂಬುವವರ ಮಗ ಮುತ್ತುರಾಜ್. ರಾಮಕೃಷ್ಣಯ್ಯ ಹಸು ಸಾಕಿದ್ದರು. ಮುತ್ತುರಾಜ್ ನಿತ್ಯ ಹೊಲಕ್ಕೆ ತೆರಳಿ ಬೆಳೆದಿದ್ದ ಮೇವು ಕುಯ್ದು ತರುತ್ತಿದ್ದ. ಸೋಮವಾರ ಮಧ್ಯಾಹ್ನ ಕೂಡ ಎಂದಿನಂತೆ ಮೇವು ತರಲು ಹೊಲಕ್ಕೆ ತೆರಳಿದ ಈ ವೇಳೆ ನಾಗರಹಾವು ಕಚ್ಚಿತು. ಕೂಡಲೇ ಪಕ್ಕದ ಹೊಲದಲ್ಲಿದ್ದವರು ಧಾವಿಸಿ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾನೆ.
ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಕಚ್ಚಿದವರಿಗೆ ನೀಡುವ ಇಂಜೆಕ್ಷನ್ ಇಲ್ಲದ ಪರಿಣಾಮ ಮೃತಪಟ್ಟಿದ್ದಾನೆ ಎಂದು ಯುವಕನ ಪಾಲಕರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಶಾಕಿಂಗ್ ನ್ಯೂಸ್- ರಾತ್ರಿ ಊಟಕ್ಕೆ ನರಮಾಂಸದ ಅಡುಗೆ ಮಾಡಿದ ಪತಿ, ಬೆದರಿ ಮನೆಯಿಂದ ಹೊರಗೋಡಿದ ಪತ್ನಿ