ವಾರಣಾಸಿ: 9ನೇ ತರಗತಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಗಿಂಕವಾಗಿ ಬಳಸಿಕೊಂಡು ನಂತರ ಬೆದರಿಸಿ ಗರ್ಭಿಣಿ ಮಾಡಿದ ಬಳಿಕ ನಂತರ ಅಬಾರ್ಶನ್ ಮಾಡಿಸಿಕೊಳ್ಳಲು ನಿರಾಕರಿಸಿದ ಬಾಲಕಿಯನ್ನು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ: ಕಾರಣ ಹೀಗಿದೆ ನೋಡಿ..!
ವಾರಣಾಸಿ ನಿವಾಸಿಯಾಗಿರುವ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕಾಗಿ ಕೋಚಿಂಗ್ ಸೆಂಟರ್ ಸೇರಿಕೊಂಡಿದ್ದಾಳೆ. ಕೋಚಿಂಗ್ ಆಪರೇಟರ್ 43 ವರ್ಷದ ಸಂಜಯ್ ಪಟೆಲ್ ವಿದ್ಯಾರ್ಥಿನಿ ಜೊತೆ ಸ್ನೇಹ ಬೆಳೆಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಪರಿಣಾಮ 9ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ಈ ಮಾಹಿತಿಯನ್ನು ಸಂಜಯ್ ಪಟೇಲ್ಗೆ ತಿಳಿಸಿದ್ದಾಳೆ. ಅರೋಪಿ ಸಂಜಯ್ ಪಟೇಲ್ ಅಬಾರ್ಶನ್ ಮಾಡಿಸಿಕೊಂಡು ತಿಳಿಸಿದ್ದಾನೆ.
ಅಬಾರ್ಶನ್ ಮಾಡಿಸಿಕೊಳ್ಳಲು ಏಕಾಂಗಿಯಾಗಿ ಹೋಗಲು ನಿರಾಕರಿಸಿದ ವಿದ್ಯಾರ್ಥಿನಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಆಕ್ರೋಶಗೊಂಡ ಸಂಜಯ್ ಪಟೇಲ್ ಅಬಾರ್ಶನ್ ಮಾಡಿಸಿಕೊಂಡಿಲ್ಲ ಎಂದು ವಿದ್ಯಾರ್ಥಿನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕೆ ವಿದ್ಯಾರ್ಥಿಯ ಮೃತದೇಹವನ್ನು ರೈಲಿನಲ್ಲಿ ಎಸೆದು ಪರಾರಿಯಾಗಿದ್ದಾನೆ.
ವಿದ್ಯಾರ್ಥಿನಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಚಿಂಗ್ ಸೆಂಟರ್ನ ನಿರ್ವಾಹಕ ಸಂಜಯ್ ಕುಮಾರ್ ಪಟೇಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಾಲಕಿಯನ್ನು ಕೊಂದು ಫೆಬ್ರವರಿ 21 ರಂದು ವಾರಣಾಸಿಗೆ ಹೋಗುವ ರೈಲಿನಲ್ಲಿ ಆಕೆಯ ಶವವನ್ನು ಎಸೆದಿದ್ದಾನೆ ಎಂದು ಹೇಳಲಾಗಿದೆ.
ಕುರಿತು ಕಾಪ್ಸೆಥಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿದ ಪೊಲೀಸರು ಸಂಜಯ್ ಸೋನಿಯಾಳನ್ನು ಕೊಂದಿರುವುದಾಗಿ ತಪ್ಪುಒಪ್ಪಿಕೊಂಡಿದ್ದಾನೆ.
ಲೋಕಸಭೆ ಚುನಾವಣೆ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ: ಕಾರಣ ಹೀಗಿದೆ ನೋಡಿ..!