More

    ಬಸವೇಶ್ವರ ಬ್ಯಾಂಕಿಗೆ 16.82 ಲಕ್ಷ ರೂ. ಲಾಭ

    ಶಿರಾಳಕೊಪ್ಪ: ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ಸದಸ್ಯರ ಸಹಕಾರದಿಂದ ಎ ಶ್ರೇಣಿಯಲ್ಲಿ ಮುಂದುವರಿದಿದ್ದು, 16.82 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎನ್.ಚಂದ್ರಮೌಳೇಶ್ವರ ಹೇಳಿದರು.

    ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ 52ನೇ ವರ್ಚುವಲ್ ಸಭೆಯನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್​ನಲ್ಲಿ 4,300ಕ್ಕೂ ಹೆಚ್ಚು ಸದಸ್ಯರಿದ್ದು, 1.22 ಕೋಟಿ ರೂ.ಗಿಂತ ಹೆಚ್ಚು ಷೇರು ಬಂಡವಾಳ ಹೊಂದಿದೆ. 25.94 ಕೋಟಿ ರೂ. ಠೇವಣಿ ಹೊಂದಿರುವ ಬ್ಯಾಂಕ್ 28.70 ಕೋಟಿ ರೂ.ಗಿಂತ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ. ಎನ್​ಪಿಎ ಶೇ.5.13ರ ರಷ್ಟಿದೆ ಎಂದರು.

    ನಿರ್ದೇಶಕ ನಟರಾಜ್ ಸೂರಣಗಿ ಮಾತನಾಡಿ, ಕಳೆದ ವರ್ಷ ಕೆನರಾ ಬ್ಯಾಂಕ್​ನಲ್ಲಿ ಚಾಲ್ತಿ ಖಾತೆಯಲ್ಲಿಟ್ಟ 57.70 ಲಕ್ಷ ರೂ.ಗಳನ್ನು ವಂಚಕರು ಬ್ಯಾಂಕ್​ ಖಾತೆ ಹ್ಯಾಕ್ ಮಾಡಿ ಹಣ ಲಪಟಾಯಿಸಿದ್ದರು. ನಮ್ಮ ಬ್ಯಾಂಕ್ ನಿರ್ದೇಶಕರ ಪ್ರಯತ್ನದಿಂದ 7 ಲಕ್ಷ ರೂ. ವಾಪಸ್ ಬಂದಿದೆ. ಕೆನರಾ ಬ್ಯಾಂಕ್​ನಲ್ಲಿಟ್ಟ ಹಣಕ್ಕೆ ವಿಮೆ ಇರುವುದರಿಂದ ಉಳಿದ ಹಣಕ್ಕೆ ಶೇ.70ರಷ್ಟು ವಿಮೆ ದೊರೆಯಲಿದೆ ಎಂದು ತಿಳಿಸಿದರು.

    ಬ್ಯಾಂಕ್ ಉಪಾಧ್ಯಕ್ಷ ಬಿ.ವಿ.ಶೇಷಗಿರಿ, ಕಾರ್ಯದರ್ಶಿ ಮಹದೇವ, ನಿರ್ದೇಶಕರಾದ ಡಾ. ಮುರುಘರಾಜ್, ನಿವೇದಿತಾ ರಾಜು, ವೇದಮೂರ್ತಿ, ಪ್ರಭುಲಿಂಗಪ್ಪ, ಆನಂದಪ್ಪ, ರಾಜೇಶ್, ಉಮೇಶ್ ಇಸಳೂರ್, ಮಹಾಗಣಪತಿ, ಷಣ್ಮುಖಪ್ಪ, ಸದಸ್ಯ ಅಶೋಕ್, ಲೆಕ್ಕ ಪರಿಶೋಧಕ ಕೆ.ವಿ.ನರೇಂದ್ರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts