ಲಖನೌ: ಸರ್ಕಾರಿ ನೌಕರರು ಇನ್ನು ಮುಂದೆ ಬೇಕಾಬಿಟ್ಟಿಯಾಗಿ ಸಮಯವನ್ನು ಹಾಳು ಮಾಡುವಂತಿಲ್ಲ. ಈ ನಿಟ್ಟಿನಲ್ಲಿ ವಿರಾಮದ ಸಮಯವನ್ನು ಕಡಿತಗೊಳಿಸಿರುವ ಯೋಗಿ ಆದಿತ್ಯನಾಥ ಸರ್ಕಾರ ಅರ್ಧಗಂಟೆಯಷ್ಟೆ ನಿಗದಿಪಡಿಸಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮಂಗಳವಾರ ಈ ಆದೇಶ ಹೊರಡಿಸಿದ್ದಾರೆ.ಸರ್ಕಾರಿ ನೌಕರರು ಹೆಚ್ಚು ಸಮಯ ವಿರಾಮ ತೆಗೆದುಕೊಳ್ಳುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂಬ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ.
1 ಗಂಟೆಗೆ ಕಚೇರಿಯಿಂದ ತೆರಳುತ್ತಿದ್ದ ನೌಕರರು 3 ಅಥವಾ 4 ಗಂಟೆಯವರೆಗೆ ಮರಳುತ್ತಿರಲಿಲ್ಲ ಎಂಬ ದೂರುಗಳು ಇತ್ತೀಚೆಗೆ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ನೌಕರರಿಗೆ 1 ರಿಂದ 1.30ರವರೆಗೆ ಮಾತ್ರ ವಿರಾಮದ ಸಮಯವನ್ನು ನಿಗದಿಪಡಿಸಿ, ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.
ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್ ಯೂ ನಾನಿ ಎಂದಿದ್ದು ಏಕೆ?