More

    ಅನಧಿಕೃತ ಗುಜರಿ ಅಂಗಡಿ ತೆರವುಗೊಳಿಸಿ

    ರಾಣೆಬೆನ್ನೂರ: ಇಲ್ಲಿಯ ಶ್ರೀರಾಮ ನಗರದ 6ನೇ ಕ್ರಾಸ್​ನಲ್ಲಿ ಕೆಲವರು ಅನಧಿಕೃತವಾಗಿ ಗುಜರಿ ಅಂಗಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಕೂಡಲೆ ಅವುಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ನಗರದ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಬುಧವಾರ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಅವರಿಗೆ ಮನವಿ ಸಲ್ಲಿಸಲಾಯಿತು.

    ಗುಜರಿ ಅಂಗಡಿಗಳನ್ನು ಹಾಕುತ್ತಿರುವ ಸ್ಥಳ ವಸತಿಯುಕ್ತ ಜಾಗವಾಗಿದೆ. ಆದ್ದರಿಂದ ಈ ಭಾಗದಲ್ಲಿ ಗುಜರಿ ಅಂಗಡಿಗಳನ್ನು ನಿರ್ವಿುಸುವಂತಿಲ್ಲ. ಆದರೂ ಕೆಲವರು ಅನಧಿಕೃತವಾಗಿ ನಿರ್ವಿುಸುತ್ತಿದ್ದಾರೆ. ಇದರಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗಲಿದೆ. ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

    ವೇದಿಕೆ ಅಧ್ಯಕ್ಷ ರಾಮನಾಥ ಮೆಹರವಾಡೆ, ಗಂಗಾಧರ ಮಹಾಂತಶೆಟ್ಟರ, ಕೃಷ್ಣಾಜಿ ಪವಾರ, ಕರಬಸಪ್ಪ ಸಾರಥಿ, ಪಿ.ಸಿ. ಕುಲಕರ್ಣಿ, ಎಂ.ಆರ್. ಸುರಳಿಕೇರಿಮಠ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts