More

    ಏಕನಾಥೇಶ್ವರಿ ದೇವಿಗೆ ಭವ್ಯ ಸ್ವಾಗತ

    ಚಿತ್ರದುರ್ಗ: ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಅಪಾರ ಭಕ್ತರು ಕೋಟೆಯೊಳಗಿನ ಮೇಲುದುರ್ಗದ ಅಮ್ಮನ ಗುಡಿಯಿಂದ ಕೆಳಗಿನ ದುರ್ಗದ ಬುರುಜನಹಟ್ಟಿಗೆ ಶಾಸ್ತ್ರ, ಸಂಪ್ರದಾಯದಂತೆ ಕರೆತಂದರು.

    ಜಾತ್ರೆ ಆರಂಭದಿಂದ ಸತತ ಮೂರು ದಿನ ಈ ಭಾಗದ ಭಕ್ತರಿಂದಲೇ ವಿಶೇಷ ಪುಷ್ಪಾಲಂಕಾರ ಸೇವೆ ಮೊದಲಿನಿಂದಲೂ ನಡೆಯುತ್ತಿದ್ದು, ಈ ಬಾರಿಯೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ ನಂತರ ಸುಸಜ್ಜಿತ ಉಚ್ಛಾಯದಲ್ಲಿ ಪ್ರತಿಷ್ಠಾಪಿಸಲಾಯಿತು. ಭಕ್ತರು ಹೊತ್ತು ಉತ್ಸವ ಮೂರ್ತಿಯನ್ನು ಕರೆತರುವಾಗ ಉಧೋ ಉಧೋ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.

    ಸಿಂಹವಾಹನ, ಸರ್ಪೋತ್ಸವದ ಮೇಲೆ ಎರಡು ದಿನ ದೇವಿಯ ಮೂರ್ತಿಯನ್ನು ಬೆಟ್ಟದಿಂದ ಕರೆತರುವ, ಪುನಾ ಕಳುಹಿಸುವ ಪ್ರಕ್ರಿಯೆ ನಡೆದಿದ್ದು, ನವಿಲು ವಾಹನರೂಢಳಾದ ದೇವಿಯ ಅಲಂಕಾರ ಸೋಮವಾರ ರಾತ್ರಿ ಕೂಡ ಭಕ್ತರ ಕಣ್ಮನ ಸೆಳೆಯಿತು. ಕೋಳಿ ಬುರುಜನಹಟ್ಟಿ, ಉಚ್ಚಂಗಿ ಯಲ್ಲಮ್ಮ ದೇಗುಲ, ಬುರುಜನಹಟ್ಟಿ, ಬರಗೇರಮ್ಮ ದೇವಿ ಪಾದದ ಗುಡಿ, ಸಿಹಿನೀರು ಹೊಂಡದ ಬೀದಿ ಸೇರಿ ವಿವಿಧೆಡೆ ನೂರಾರು ಭಕ್ತರು ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿ, ಪ್ರಸಾದ ಹಂಚಿದರು.

    ಏ. 30ರಂದು ಮೇಲುದುರ್ಗದ ಗುಡಿಯಲ್ಲಿ ಮೂಲ ಮೂರ್ತಿಗೆ ನೂರಾರು ಕೆ.ಜಿ. ಅರಿಶಿಣದಿಂದಲೇ ದೊಡ್ಡ ಭಂಡಾರದ ಪೂಜೆ, ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆಗಳೂ ನಡೆಯಲಿದೆ. ಸಂಪ್ರದಾಯದಂತೆ ಮೇ 1ರಂದು ಕೆಳಗಿನ ದುರ್ಗಕ್ಕೆ ಅಶ್ವವಾಹನದ ಮೂಲಕ ಕರೆತಂದು, ನಾಲ್ಕು ದಿನ ಭಕ್ತರಿಂದ ಪೂಜೆ ಸ್ವೀಕರಿಸಿ, ದೇವಿಯ ಪಾದದ ಗುಡಿ ಮುಂಭಾಗ ಜಾತ್ರೆ ಸಂಪನ್ನಗೊಂಡ ನಂತರವೇ ಅಮ್ಮನ ಮೂರ್ತಿ ಗುಡಿತುಂಬಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts