ವಿರಾಜಪೇಟೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗೋಣಿಕೊಪ್ಪ ಮತ್ತು ಅಮ್ಮತ್ತಿ ವಲಯಗಳ ಶೌರ್ಯ ವಿಪತ್ತು ಘಟಕ ವತಿಯಿಂದ ಚೆನ್ನಂಗೊಲ್ಲಿಯಿಂದ ಮಾಯಮುಡಿ ಮುರುಡೇಶ್ವರ ದೇವಸ್ಥಾನವರೆಗೆ ಸ್ವಚ್ಛತಾ ಕಾರ್ಯ ನಯಿತು.
ರಸ್ತೆಯ ಎರಡೂ ಬದಿಯಲ್ಲಿ ಎಸೆಯಲಾಗಿದ್ದ ಪೇಪರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಯಂ ಸೇವಕರು ತೆಗೆಯುವ ಮೂಲಕ ಶುಚಿಗೊಳಿಸಿದರು. ಸಂಘದ ಮೇಲ್ವಿಚಾರಕರಾದ ಧನೇಶ್ಕುಮಾರ್, ಗ್ರಾಪಂ ಅಧ್ಯಕ್ಷ ಟಾಟು ಮೊಣ್ಣಪ್ಪ ಇತರರಿದ್ದರು.