ಮುಂಬೈ: ನ್ಯೂಕ್ಲಿಯರ್ ಪವರ್ ಸ್ಟೇಷನ್ ಭದ್ರತೆಗೆ ನಿಯೋಜಿಸಲಾಗಿದ್ದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್(ಸಿಐಎಸ್ಎಫ್) ಯೋಧ ಪಿಸ್ತೂಲ್ ಹಾಗೂ ಗುಂಡುಗಳ ಸಮೇತ ನಾಪತ್ತೆಯಾಗಿದ್ದಾನೆ. ಗುರುವಾರ ಮಧ್ಯಾಹ್ನದಿಂದಲೇ ನಾಪತ್ತೆ ಆಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಮನೋಜ್ ಯಾದವ್ ಎಂಬಾತನೇ ನಾಪತ್ತೆಯಾಗಿರುವ ಸಿಐಎಸ್ಎಫ್ ಯೋಧ. ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ತಾರಾಪುರ ನ್ಯೂಕ್ಲಿಯರ್ ಪವರ್ ಸ್ಟೇಷನ್ನಲ್ಲಿ ಈತನನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಈತ ಸಿಐಎಸ್ಎಫ್ ಕ್ವಾರ್ಟರ್ಸ್ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಕರ್ತವ್ಯಕ್ಕೆ ಹಾಜರಾಗದ್ದ ಹಿನ್ನೆಲೆಯಲ್ಲಿ ಗಮನಿಸಿದಾಗ ನಾಪತ್ತೆ ಆಗಿರುವುದು ತಿಳಿದುಬಂದಿದೆ.
ಈತನೊಂದಿಗೆ ಪಿಸ್ತೂಲ್ ಮತ್ತು 30 ಜೀವಂತ ಗುಂಡುಗಳು ಕೂಡ ಕಾಣೆಯಾಗಿದ್ದು, ನಾಪತ್ತೆಯಾಗಿರುವ ಸೈನಿಕನ ಪತ್ತೆಗಾಗಿ ಸಿಐಎಸ್ಎಫ್ ಹಾಗೂ ಮಹಾರಾಷ್ಟ್ರ ಪೊಲೀಸ್ ಎರಡೂ ಕಡೆಯಿಂದಲೂ ವಿವಿಧ ತಂಡಗಳನ್ನು ರಚಿಸಿ ಹುಡುಕಾಟ ನಡೆಸಲಾಗುತ್ತಿದೆ. ಸಿಐಎಸ್ಎಫ್ ತಾರಾಪುರ-ಬೊಯ್ಸರ್ನಲ್ಲಿರುವ ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಮತ್ತು ತಾರಾಪುರ ನ್ಯೂಕ್ಲಿಯರ್ ಪವರ್ ಸ್ಟೇಷನ್ಗೆ ಭದ್ರತೆ ಒದಗಿಸುತ್ತಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಹಿನ್ನೆಲೆಯಲ್ಲಿ ಇಲ್ಲಿ ಹೆಚ್ಚಿನ ಭದ್ರತೆಯನ್ನು ನೀಡಲಾಗಿರುತ್ತದೆ.
ಭದ್ರತೆಗೆ ನಿಯೋಜಿಸಲಾಗಿರುವ ಯೋಧರು ಪಾಳಿಗೆ ಒಂದು ಗಂಟೆ ಮೊದಲು ಆಯುಧವನ್ನು ಪಡೆದುಕೊಳ್ಳುತ್ತಾರೆ. ಆದರೆ 9 ಗಂಟೆಯ ರಾತ್ರಿಪಾಳಿಗೆ ನಿಯೋಜನೆ ಆಗಿದ್ದ ಯಾದವ್, ರಾತ್ರಿ 8 ಗಂಟೆಗೆ ಆಯುಧಗಳನ್ನು ಪಡೆಯುವ ಬದಲು ಮಧ್ಯಾಹ್ನವೇ ಪಡೆದಿದ್ದು ಕುತೂಹಲ ಮೂಡಿಸಿದೆ. ಈ ವಿಷಯದಲ್ಲಿ ಎಸ್ಒಪಿ ಪಾಲಿಸದ್ದರಿಂದ ಆಯುಧ ಹಂಚಿಕೆ ಸಿಬ್ಬಂದಿ ವಿರುದ್ಧ ಆಂತರಿಕ ತನಿಖೆ ನಡೆಯಲಿದೆ ಎನ್ನಲಾಗಿದೆ.
21 ಪ್ರಯಾಣಿಕರಿದ್ದ ಬಸ್ ಪಲ್ಟಿ, ಬಸ್ ಚಕ್ರದಡಿಗೆ ಸಿಲುಕಿಕೊಂಡ ಬೈಕ್..
ಬೆಂಗಳೂರು-ಮೈಸೂರು ಮಾರ್ಗದಲ್ಲಿ ಮತ್ತೆ ಪ್ರವಾಹ ಸಾಧ್ಯತೆ; ಇನ್ನು 4 ದಿನ ಭಾರಿ ಮಳೆ ಮುನ್ಸೂಚನೆ..