More

    ವೇತನ ಜತೆ ಗೌರವ ಧನ ನೀಡಲು ಮನವಿ

    ಚಿತ್ರದುರ್ಗ: ಜಗತ್ತನ್ನು ಸಂಕಷ್ಟಕ್ಕೆ ದೂಡಿರುವ ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಗೂ ಪೌರಕಾರ್ಮಿಕರಿಗೆ ವೇತನದ ಜತೆಗೆ ಗೌರವ ಧನ ನೀಡಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಜಿತೇಂದ್ರ ಎನ್.ಹುಲಿಕುಂಟೆ ಒತ್ತಾಯಿಸಿದ್ದಾರೆ.

    ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಜನರು ಭಯಗೊಂಡು ಮನೆ ಸೇರಿರುವ ಸಂದರ್ಭ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಈ ವರ್ಗದ ಜನರಿಗೆ ಈ ತಿಂಗಳ ವೇತನದ ಜತೆಗೆ ಗೌರವ ಧನ ನೀಡುವುದು ಮಾನವೀಯ ನಡೆ ಆಗಿದೆ. ಪಕ್ಷದ ಅಧ್ಯಕ್ಷರು ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts