More

    ಮುರುಘಾ ಮಠದಲ್ಲಿ ದಾಸೋಹ ಇಲ್ಲ

    ಚಿತ್ರದುರ್ಗ: ಮುರುಘಾ ಮಠ, ಚಮುರೀಗಿ ಶಾಂತವೀರ ಸ್ವಾಮೀಜಿ ಅವರ ಕತೃಗದ್ದುಗೆ ಹಾಗೂ ಮುರುಘಾ ವನಕ್ಕೆ ಎಂದಿನಂತೆ ಭಕ್ತರ ಪ್ರವೇಶಕ್ಕೆ ಅ ವಕಾಶ ನೀಡಲಾಗುವುದು ಎಂದು ಶ್ರೀ ಶಿವಮೂರ್ತಿ ಶರಣರು ತಿಳಿಸಿದ್ದಾರೆ.

    ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರೊನಾ ಸಂಕಟದ ಈ ಸಮಯದಲ್ಲಿ ಶಿಸ್ತು ಮುಖ್ಯ. ನಮ್ಮ ಜೀವ ಕಾಪಾಡಿಕೊಳ್ಳುವುದರ ಜೊತೆಗೆ ನಾವು ಜೀವನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಅತ್ಯಂತ ಜಾಗ್ರತೆ ವಹಿಸಬೇಕು. ಮಠಕ್ಕೆ ಭಕ್ತರಿಗೆ ಪ್ರವೇಶ ಕಲ್ಪಿಸಿದ್ದೇವೆ. ಆದರೆ, ಶ್ರೀಮಠದಲ್ಲಿ ಸದ್ಯಕ್ಕೆ ದಾಸೋಹ ಆರಂಭಿಸುವುದಿಲ್ಲ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts